ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆ

Update: 2019-11-15 16:55 GMT

ಗಂಗೊಳ್ಳಿ, ನ.15: ಗಂಗೊಳ್ಳಿ ಬಂದರಿನಲ್ಲಿ ನಿಲ್ಲಿಸಲಾದ ಬೋಟಿನಲ್ಲಿ ಬಲೆ ಸ್ವಚ್ಛಗೊಳಿಸುತ್ತಿದ್ದ ಮೀನುಗಾರರೊಬ್ಬರು ಆಯ ತಪ್ಪಿ ನೀರಿಗೆ ಬಿದ್ದು ನಾಪತ್ತೆ ಯಾಗಿರುವ ಘಟನೆ ನ.14ರಂದು ರಾತ್ರಿ 10ಗಂಟೆ ಸುಮಾರಿಗೆ ನಡೆದಿದೆ.

ಗಂಗೊಳ್ಳಿಯ ರಾಮನಾಥ ಪೈ ಎಂಬವರ ಬೋಟಿನಲ್ಲಿ ಕೆಲಸ ಮಾಡಿ ಕೊಂಡಿದ್ದ ಖಾಗೇಶ್ವರ ಮಾಜಿ(29) ಎಂಬವರು ಇತರರೊಂದಿಗೆ ಮೀನುಗಾರಿಕೆ ಮುಗಿಸಿ ಗಂಗೊಳ್ಳಿ ಬಂದರಿನಲ್ಲಿ ಮೀನಗಳನ್ನು ಖಾಲಿ ಮಾಡಿ ಮೀನುಗಾರಿಕೆ ಬಲೆಯನ್ನು ಸ್ವಚ್ಛಗೊಳಿಸುತ್ತಿರುವಾಗ ಆಯತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News