ಬ್ಯಾಂಕ್ ಖಾತೆಯಿಂದ ಹಣ ವಂಚನೆ: ದೂರು

Update: 2019-11-15 17:26 GMT

ಉಡುಪಿ, ನ.15: ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿ ನಂಬಿಸಿ ಎಟಿಎಂ ನಂಬರ್ ಪಡೆದು ಖಾತೆಯಿಂದ ಲಕ್ಷಾಂತರ ರೂ. ಡ್ರಾ ಮಾಡಿ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ಮಣಿಪಾಲ ನಿವಾಸಿ ವಿಶ್ವೇಶ್ ಕೃಷ್ಣ(18) ಎಂಬವರ ಮೊಬೈಲ್‌ಗೆ ನ.12ರಂದು ಐಸಿಐಸಿಐ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿದ ವ್ಯಕ್ತಿಯೊಬ್ಬರು ಎಟಿಎಂ ಕಾರ್ಡ್ ನಂಬ್ರ ಹಾಗೂ ಒಟಿಪಿ ನಂಬ್ರ ಪಡೆದು, 6 ಬಾರಿ ಒಟ್ಟು 1,29,899ರೂ. ಹಣವನ್ನು ಅವರ ಖಾತೆಯಿಂದ ವಿದ್ ಡ್ರಾ ಮಾಡಿ, ವಂಚನೆ ವಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News