ಉಳ್ಳಾಲ ಹಳೆಕೋಟೆ: ಮರ್ಖಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಮೀಲಾದುನ್ನಬಿ ಕಾರ್ಯಕ್ರಮ

Update: 2019-11-17 06:34 GMT

ಉಳ್ಳಾಲ, ನ.17: ಹಳೆಕೋಟೆಯ ಮರ್ಖಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ 27ನೇ ವಾರ್ಷಿಕೋತ್ಸವ ಹಾಗೂ ಮದ್ರಸ ವಿದ್ಯಾರ್ಥಿಗಳ ಮೀಲಾದುನ್ನಬಿ ಕಾರ್ಯಕ್ರಮ ಶನಿವಾರ ನಡೆಯಿತು.

 ಕಾರ್ಯಕ್ರಮದ ಅಂಗವಾಗಿ ಹಳೆಕೋಟೆಯಿಂದ ಉಳ್ಳಾಲ ದರ್ಗಾದವರೆಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು‌.

ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ, ಹಳೆಕೋಟೆ ಮಸೀದಿಯ ಅಧ್ಯಕ್ಷ ಹಾಜಿ ತ್ವಾಹ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲ್ಯಾಸ್ ಹಾಜಬ್ಬ, ಹಾಜಿ ಝೈನುದ್ದೀನ್, ಖತೀಬ್ ಉಸ್ಮಾನ್ ಸಅದಿ, ಸದರ್ ಮುಅಲ್ಲಿಮ್ ಇರ್ಫಾನ್ ಮದನಿ, ಮುಅಝ್ಝಿನ್ ಆದಂ ಮುಸ್ಲಿಯಾರ್, ಅಲ್ತಾಫ್ ಯು.ಎಚ್.ಹಾಜಿ ಲತೀಫ್, ಮುಹಮ್ಮದ್ ಮೇಸ್ತ್ರಿ, ಇಸ್ಮಾಯೀಲ್ ಹಾಜಬ್ಬ, ಅಬ್ದುಲ್ ಶಮೀರ್, ಎಂ.ಎಚ್.ಇಬ್ರಾಹೀಂ, ಕರೀಮಾಕ, ಶಬೀರ್ ಹಸನ್, ಅಬ್ದುಲ್ ರಹ್ಮಾನ್ ಹಳೆಕೋಟೆ, ಅಬ್ದುಲ್ ರವೂಫ್, ರಫೀಕ್ ಎಚ್. ಫಾರೂಕ್ ಯು.ಎಚ್., ಸಫ್ವಾನ್, ರಫೀಕ್, ಮುಹಮ್ಮದ್ ಫೈರೋಝ್, ಫಾರೂಕ್ ಎಚ್.ಎಂ. ಹಾಗೂ ಸಹ ಮುಅಲ್ಲಿಮರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News