×
Ad

ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಸನ್ಮಾನ

Update: 2019-11-17 16:17 IST

ಮಂಗಳೂರು, ನ.17: ಇತ್ತೀಚೆಗೆ ನಡೆದ ದ.ಕ. ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ-2019 ಕಾರ್ಯಕ್ರಮದಲ್ಲಿ ಧಾರ್ಮಿಕ ಪಠಣ (ಅರೇಬಿಕ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಅಬ್ದುಲ್ ರಹಿಮಾನ್ ಶಾಬಾಸ್ ನನ್ನು ಬಾಮಿ ಆಲುಮ್ನಿ ಅಸೋಸಿಯೇಶನ್ ವತಿಯಿಂದ ಗುರುಪುರದ ಬಾಮಿ ಆಂಗ್ಲ ಮಾಧ್ಯಮ ಶಾಲೆ, ತೆಂಕುಳಿಪಾಡಿಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಮಿ ಆಲುಮ್ನಿ ಅಸೋಸಿಯೇಶನ್ ಇದರ ಅಧ್ಯಕ್ಷ ಬಾತಿಶ್ ಗುರುಪುರ, ಉಪಾಧ್ಯಕ್ಷ ಅಜ್ಮಲ್ ಗುರುಪುರ, ಕಾರ್ಯದರ್ಶಿ ಫಾರಿಶ್ ಸುರಲ್ಪಾಡಿ, ಸಂಘಟನಾ ಕಾರ್ಯದರ್ಶಿ ಶಾಝಿಲ್ ಉಳಾಯಿಬೆಟ್ಟು, ಸದಸ್ಯರಾದ ಸಿಮಾಕ್ ವಾಮಂಜೂರ್, ಬಾಮಿ ಶಾಲೆಯ ಸ್ಥಾಪಕ ಮುಹಮ್ಮದ್, ಕರೆಸ್ಪಾಂಡೆಂಟ್ ರಿಯಾಝ್, ಶಿಕ್ಷಣ ಸಂಯೋಜಕ ರಹಿಮಾನ್ ಹಾಗೂ ಬಾಮಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News