ಸಿಡಿಲಿನ ಶಬ್ದಕ್ಕೆ ಕುಸಿದು ಬಿದ್ದು ಮೃತ್ಯು

Update: 2019-11-17 16:11 GMT

ಕಾರ್ಕಳ, ನ.17: ಸಿಡಿಲಿನ ಶಬ್ದದಿಂದ ಮನೆಯೊಳಗೆ ಇದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನ.16ರಂದು ಮಧ್ಯಾಹ್ನ ವೇಳೆ ಎರ್ಲಪಾಡಿ ಹೆಪ್ಪಳ ಎಂಬಲ್ಲಿ ನಡೆದಿದೆ.

 ಮೃತರನ್ನು ಹೆಪ್ಪಳ ನಿವಾಸಿ ವಿಶ್ವನಾಥ ನಾಯ್ಕ್(54) ಎಂದು ಗುರುತಿಸ ಲಾಗಿದೆ. ಏಳು ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿರುವ ಇವರು, ಮನೆಯ ಒಳಗಡೆ ಕುಳಿತುಕೊಂಡಿರುವಾಗ ಜೋರಾಗಿ ಬಂದ ಸಿಡಿಲಿನ ಶಬ್ದಕ್ಕೆ ಕುಸಿದು ಬಿದ್ಧರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು, ಬೈಲೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News