ಅಕ್ರಮ ಮರಳು ಸಾಗಾಟ: ವಾಹನ ವಶ

Update: 2019-11-17 16:13 GMT

ಬೈಂದೂರು, ನ.17: ನಾವುಂದ ಗ್ರಾಮದ ಕಾರಂತರಹಿತ್ಲುವಿನ ಸೌಪರ್ಣಿಕಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸಲು ಪ್ರಯತ್ನಿಸುತ್ತಿದ್ದ ಮಿನಿ ಟಿಪ್ಪರನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನ.17ರಂದು ಬೆಳಗಿನ ಜಾವ ನಡೆದಿದೆ.

ದಾಳಿ ವೇಳೆ ವಾಹನದ ಚಾಲಕ ಹಾಗೂ ಇಬ್ಬರು ಕಾರ್ಮಿಕರು ಪರಾರಿಯಾಗಿದ್ದಾರೆ. ಮರಳು ಸಾಗಿಸಲು ಯತ್ನಿಸುತ್ತಿದ್ದ ಮಿನಿ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News