ಕಾಪು : ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮ ಉದ್ಘಾಟನೆ

Update: 2019-11-17 16:42 GMT

ಕಾಪು : ಕನ್ನಡ ಭಾಷೆ ಮತ್ತು ಸಾಹಿತ್ಯ ಸಮೃದ್ಧಗೊಳ್ಳುವಲ್ಲಿ ಜೈನ ಕವಿಗಳು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಮರೂರು ನಾರಾಯಣ ಹೆಬ್ಬಾರ್ ಹೇಳಿದರು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಪರಂಪೆರೆಯಲ್ಲಿ ಬರುವ ಬರುವ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡಾ ಪುರಾತನ ಮತ್ತು ಸಮೃದ್ಧವಾದ ಭಾಷೆಯಾಗಿದೆ. ಆದಿ ಕವಿಗಳು, ನಡುಕಾಲದ ಕವಿಗಳು, ಹೊಸ ಕವಿಗಳು ಮತ್ತು ಆಧುನಿಕ ಕವಿಗಳು ರಚಿಸಿದ ಕಾವ್ಯ, ಗ್ರಂಥಗಳು ಕೂಡಾ ಕನ್ನಡ ಭಾಷೆಯ ಸಮೃದ್ಧತೆ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿವೆ ಎಂದರು.

ಹಳೇ ಗನ್ನಡ, ನಡು ಗನ್ನಡ ಮತ್ತು ಹೊಸ ಕನ್ನಡ, ಆಧುನಿಕ ಕನ್ನಡಗಳಲ್ಲಿ ನಿರಂತರ ಬದಲಾವಣೆ ಕಂಡು ಬರುತ್ತಿದ್ದರೂ ಕೂಡಾ ಇದರಿಂದ ಕನ್ನಡ ಭಾಷೆಯ ನಿರಂತರ ಬೆಳವಣೆಯಾಗುತ್ತಿದೆ. ಹಳೇ ಕನ್ನಡಗಳಲ್ಲಿ ಮೌಲ್ಯಭರಿತ ಸಾಹಿತ್ಯವಿತ್ತು. ಸಾಹಿತ್ಯದ ಜೊತೆಗೆ ಭಾಷೆಯ ಜೋಡಣೆಯಾಗುತ್ತಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸಾಹಿತ್ಯವನ್ನೂ ವಿಂಗಡಿಸಿ ನೋಡಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕನ್ನಡ ಭಾಷೆ, ಸಾಹಿತ್ತಯ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ ಮಾತನಾಡಿ,  ಮಾತೃಭಾಷೆಯಲ್ಲಿ ಪ್ರಾರಂಭಿಸಿದ ಯೋಚನೆಗಳನ್ನು ಇತರ ಭಾಷೆಗಳಿಗೆ ಅನುವಾದ ಮಾಡಿಕೊಂಡು ನಾವು ಮಾತನಾಡುತ್ತೇವೆ. ಮತ್ತು ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತಿದ್ದೇವೆ. ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸುವ ಅಗತ್ಯತೆಯಿದೆ ಎಂದರು.

ಸಾಹಿತಿ ಮುದ್ದು ಮೂಡುಬೆಳ್ಳೆ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ವಿದ್ಯಾನಿಕೇತನ ಸಮೂಹ ವಿದ್ಯಾಸಂಸ್ಥೆಯ ಮುಖ್ಯ ಅಡಳಿತಾಧಿಕಾರಿ ಪ್ರೊ. ವಿ. ಕೆ ಉದ್ಯಾವರ,  ಕನ್ನಡ ಸಂಘದ ಅಧ್ಯಕ್ಷೆ ಸಂಜನಾ ಉಪಸ್ಥಿತರಿದ್ದರು. 

ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲ  ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ತಾಲೂಕು ಸಮಿತಿ ಸದಸ್ಯೆ ಸುದಕ್ಷಿಣೆ ಪ್ರಸ್ತಾವನೆಗೈದರು. ಕೃಷ್ಣ ಕುಮಾರ್ ರಾವ್ ಪರಿಚಯಿಸಿದರು. ಅನುಷ್ಕಾ ಬಹುಮಾನಿತರ ಪಟ್ಟಿ ವಾಚಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು. ವಿದ್ಯಾರ್ಥಿನಿ ದಿಶಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News