‘ಮಂಗಳೂರಿನ ಪೆಟ್ರೋಲ್ ಬಂಕ್ ಸಮೀಪ ಹಣ ಸಿಕ್ಕಿದೆ; ವಾರಸುದಾರರು ಸಂಪರ್ಕಿಸಿ’

Update: 2019-11-18 14:27 GMT
ಸಾಂದರ್ಭಿಕ ಚಿತ್ರ

ಮಂಗಳೂರು, ನ.18: ನಗರದ ಫಳ್ನೀರ್‌ನ ಸಂಜೀವಿನಿ ಕ್ಲಿನಿಕ್ ಎದುರಿನ ಪೆಟ್ರೋಲ್ ಬಂಕ್ ಸಮೀಪದಲ್ಲಿ ಹಣದ ಕಂತೆ ಸಿಕ್ಕಿದ್ದು, ವಾರಸುದಾರರು ಸೂಕ್ತ ದಾಖಲೆ ಹಾಜರುಪಡಿಸಿ ಹಣ ಪಡೆದುಕೊಳ್ಳಬಹುದು ಎಂದು ಝೆಡ್ಸ್ ಹೋಮ್ ಫ್ಯಾಬ್‌ನ ಅಲ್ತಾಫ್ ತಿಳಿಸಿದ್ದಾರೆ.

ಫಳ್ನೀರ್‌ನಲ್ಲಿ ಸೋಮವಾರ ಹಣದ ಕಂತೆ ಸಿಕ್ಕಿದೆ. ಪರರ ಹಣ ಬಳಸುವುದು ಮಹಾಪಾಪ. ನಮಗೂ ಇಂತಹ ಪರಿಸ್ಥಿತಿ ಬರಬಹುದು. ನಾವೂ ಹಣ ಕಳೆದುಕೊಳ್ಳಬಹುದು. ನಗದು ಹಣ ಕಳೆದುಕೊಂಡವರು ಕಷ್ಟದಲ್ಲಿರಬಹುದು. ವಾರಸುದಾರರು ತಾವು ಕಳೆದುಕೊಂಡ ‘ಹಣದ ಮೌಲ್ಯ, ನೋಟುಗಳ ಮುಖಬೆಲೆ, ಹಣ ಕಳೆದುಕೊಂಡ ಸಮಯ, ಯಾವ ವಸ್ತುವಿನಿಂದ ಹಣವನ್ನು ಕಟ್ಟಿಡಲಾಗಿತ್ತು’ ಎಂಬ ಸೂಕ್ತ ಮಾಹಿತಿ ಒದಗಿಸಿ ಹಣ ಕೊಂಡ್ಯೊಯ್ಯಬಹುದು ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ನಗರದ ಕೆಎಸ್ ರಾವ್ ರಸ್ತೆಯ ಮಿಸ್ಚೀಫ್ ಮಾಲ್‌ನ ಮೊದಲನೇ ಮಹಡಿಯಲ್ಲಿನ ಝೆಡ್ಸ್ ಹೋಮ್ ಫ್ಯಾಬ್‌ನ ಅಲ್ತಾಫ್ (+919743898928) ಅವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News