‘ಪ್ರಕಾಶಾಭಿನಂದನ’ ನೆನಪಿನ ಸಂಪುಟಕ್ಕೆ ಲೇಖನ-ಮಾಹಿತಿ-ಚಿತ್ರಗಳ ಆಹ್ವಾನ

Update: 2019-11-20 17:14 GMT

ಮಂಗಳೂರು, ನ.20: ಉದ್ಯಮಿ, ಸಮಾಜ ಸೇವಕ, ಎಂ.ಆರ್.ಜಿ ಸಮೂಹ ಉದ್ಯಮ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಅರವತ್ತು ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಒಗ್ಗೂಡಿ ‘ಪ್ರಕಾಶಾಭಿನಂದನ’ ಎಂಬ ಸಮಾರಂಭವನ್ನು ಆಯೋಜಿಸಿದೆ.

ಈ ಕಾರ್ಯಕ್ರಮವು ಡಿ. 25ರಂದು ಮಂಗಳೂರಿನ ಬಂಗ್ರ ಕೂಳೂರಿನಲ್ಲಿ ನಡೆಯಲಿದೆ. ಆ ಹಿನ್ನೆಲೆಯಲ್ಲಿ ನೆನಪಿನ ಸಂಪುಟವೊಂದನ್ನು ಹೊರತರಲು ಯೋಜಿಸಲಾಗಿದೆ. ಪ್ರಕಾಶ್ ಶೆಟ್ಟಿ ಅವರೊಂದಿಗಿನ ಒಡನಾಟದ ನೆನಪು, ಪಡೆದ ನೆರವು, ಮಾರ್ಗದರ್ಶನ ಇತ್ಯಾದಿ ವಿವರಗಳನ್ನು ಎರಡು ಪುಟಗಳಿಗೆ ಮೀರದಂತೆ ಲೇಖನ ರೂಪದಲ್ಲಿ ಸಿದ್ಧಪಡಿಸಿ ನ.28ರೊಳಗಾಗಿ ಇಮೇಲ್ prakashabhinandana@ gmail.com ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಅಲ್ಲದೆ ಅವರ ಜೀವನ, ಸಾಧನೆ, ಕಾರ್ಯನಿರ್ವಹಣೆ, ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತ್ಯಾದಿಗಳಿಗೆ ಸಂಬಂಧಿಸಿದ ಪತ್ರಿಕಾ ವರದಿ, ಮಾಹಿತಿ, ಚಿತ್ರಗಳು ಲಭ್ಯವಿದ್ದಲ್ಲಿ ಅವುಗಳನ್ನು ಕೂಡಾ ಕಳುಹಿಸಿಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಚಿಕೆಯ ಸಂಪಾದಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರನ್ನು ಮೊ.ಸಂ: 8762822427 ಹಾಗೂ ವಾಟ್ಸ್‌ಆ್ಯಪ್ ಸಂ: 9482902748 ಮೂಲಕ ಸಂಪರ್ಕಿಸಬಹುದು ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News