ಪಾಂಬೂರು ವಿಶೇಷ ಮಕ್ಕಳ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ

Update: 2019-11-21 14:24 GMT

ಕಾಪು, ನ.21: ಪ್ರವಾದಿ ಮುಹಮ್ಮದ್(ಸ.ಅ.) ಅವರ ಜನ್ಮದಿನಾಚರಣೆ ಪ್ರಯುಕ್ತ ಕಾಪು ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿ ಯೇಶನ್ ವತಿಯಿಂದ ಬಂಟಕಲ್ಲು ಪಾಂಬೂರಿನ ಮಾನಸ ವಿಶೇಷ ಮಕ್ಕಳ ಪುನವರ್ಸತಿ ಕೇಂದ್ರದಲ್ಲಿ ಬುಧವಾರ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು

ಯಂಗ್‌ಮೆನ್ಸ್‌ನ 30ನೆ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಳ್ಳ ಲಾದ ಈ ಕಾರ್ಯಕ್ರಮದಲ್ಲಿ ಕೇಂದ್ರದ ಸುಮಾರು 120 ವಿದ್ಯಾರ್ಥಿಗಳು ಹಾಗೂ 40 ಸಿಬ್ಬಂದಿ ವರ್ಗದವರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು. ಮುಖ್ಯ ಅತಿಥಿಯಾಗಿ ಪೊಲಿಪು ಜಾಮೀಯ ಮಸೀದಿಯ ಖತೀಬ್ ಇರ್ಷಾದ್ ಸಅದಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುದರ್ರಿಸ್ ಅಶ್ರಫ್ ಸಖಾಫಿ, ಮಾನಸ ಕೇಂದ್ರದ ಪ್ರಾಂಶುಪಾಲರು, ಶಿಕ್ಷಕರು, ಯಂಗ್‌ಮೆನ್ಸ್‌ನ ಅಧ್ಯಕ್ಷ ಅಕ್ರಂ ಗುಡ್‌ವಿಲ್, ಹಿರಿಯ ಸದಸ್ಯರಾದ ಎಚ್.ಮುಹಮ್ಮದ್, ಎಚ್. ಹಸನ್, ರಜಬ್ ಉಮ್ಮರಬ್ಬ ಾಗೂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News