ಹಿರಾ ಶಾಲಾ ವಿದ್ಯಾರ್ಥಿಗಳು ಪೊಲೀಸ್ ಠಾಣೆಗಳಿಗೆ ಭೇಟಿ

Update: 2019-11-21 15:45 GMT

ಮಂಗಳೂರು, ನ.21: ವಿಜ್ಞಾನ ಮೇಳದ ಅಂಗವಾಗಿ ವೀಡಿಯೊ ಗೇಮ್‌ಗಳಿಂದ ಸಂಭವಿಸಿದ ಅನಾಹುತಗಳ ಬಗ್ಗೆ ಮಾಹಿತಿ ಕಲೆ ಹಾಕಲು ಬಬ್ಬುಕಟ್ಟೆಯ ಹಿರಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉಳ್ಳಾಲ ಮತ್ತು ಮಂಗಳೂರು ನಗರ ಪೂರ್ವ (ಕದ್ರಿ) ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳಾದ ಉಮರ್ ಇಬ್ರಾಹೀಂ ರಹಮತುಲಾ, ನಫೀಸಾ ಹಿಬತ, ನಿಧಾ ಖತೀಜ ನೂರ್ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಉಳ್ಳಾಲ ಠಾಣಾ ಅಧಿಕಾರಿಗಳಾದ ರಾಧಾಕೃಷ್ಣ, ರಮೇಶ್ ಚಿಕ್ಕಮಗಳೂರು, ಶಾಂತಪ್ಪ, ಸುನೀತಾ ಹಾಗೂ ಕದ್ರಿ ಠಾಣೆಯ ಅಧಿಕಾರಿಗಳಾದ ಸುಧಾಕರ, ಗಿರೀಶ್, ಮನೋಹರ್, ಶಿವಾನಂದ, ದಿಪೀಕಾ ಮಕ್ಕಳಿಗೆ ವೀಡಿಯೊ ಗೇಮ್‌ನ ಅನಾಹುತ ಹಾಗೂ ದುಷ್ಪರಿಣಾಮ ಕುರಿತ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News