ನೇಣುಬಿಗಿದು ಆತ್ಮಹತ್ಯೆ

Update: 2019-11-21 16:20 GMT

ಮಂಗಳೂರು, ನ.21: ಕಾವೂರು ಕೊರಂಟಾಡಿಗುಡ್ಡೆಯಲ್ಲಿ ವ್ಯಕ್ತಿಯೊಬ್ಬರು ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರಂಟಾಡಿಗುಡ್ಡೆ ನಿವಾಸಿ ಲಕ್ಷ್ಮಣ (65) ಮೃತಪಟ್ಟವರು.

ಹಿಟ್ಟು ರುಬ್ಬುವ ಕೆಲಸ ಮಾಡಿಕೊಂಡಿದ್ದ ಇವರು ಕೆಲವು ಸಮಯದಿಂದ ಆ ಕೆಲಸ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇವರ 6 ಮಕ್ಕಳಲ್ಲಿ ಒಬ್ಬ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಗನನ್ನು ನೋಡಲು ಆಸ್ಪತ್ರೆಗೆ ತೆರಳಿದವರು ಮರಳಿ ಮನೆಗೆ ಬಂದು ರೂಮಿಗೆ ಹೋಗಿದ್ದಾರೆ. ಇದನ್ನು ಯಾರೂ ಗಮನಿಸಿರಲಿಲ್ಲ. ಸಂಜೆ ಮನೆಯವರು ರೂಮಿಗೆ ಹೋಗಿ ನೋಡುವಾಗ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News