ಮಟ್ಕಾ: ಮೂವರ ಬಂಧನ

Update: 2019-11-21 16:26 GMT

ಬ್ರಹ್ಮಾವರ, ನ.21: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜುಗಾರಿಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖ ಲಿಸಿಕೊಂಡಿದ್ದಾರೆ.

 ನ.21ರಂದು ಬ್ರಹ್ಮಾವರ ಪೊಲೀಸ್ ಠಾಣೆಯ ಉಪ್ಪೂರು ಗ್ರಾಮದ ಜಾತಬೆಟ್ಟು ಲಕ್ಷ್ಮೀ ಬಾರ್ ಬಳಿ ಉಪ್ಪೂರು ಉಗ್ಗೇಲ್‌ಬೆಟ್ಟುವಿನ ರತ್ನಾಕರ ಪೂಜಾರಿ(45) ಎಂಬಾತನನ್ನು 620ರೂ. ನಗದು, ನ.20ರಂದು ಶಂಕರನಾರಾ ಯಣ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರನಾರಾಯಣ ಬಸ್ ನಿಲ್ದಾಣದ ಬಳಿ ಸ್ಥಳೀಯ ನಿವಾಸಿ ಶ್ರೀಧರ ಶೇಟ್(63) ಎಂಬಾತನನ್ನು 4190ರೂ. ನಗದು ಮತ್ತು ಪಡುಬಿದ್ರಿ ಪೊಲಿಸ್ ಠಾಣಾ ವ್ಯಾಪ್ತಿಯ ಪಡುಬಿದ್ರಿ ಮಾರುಕಟ್ಟೆಯ ಕೀರ್ತಿ ಹೊಟೇಲ್ ಬಳಿ ಕಂಚಿನಡ್ಕದ ಮೊಹಮ್ಮದ್(43) ಎಂಬಾತನನ್ನು 3,150ರೂ. ನದಿನೊಂದಿಗೆ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News