ಅಕ್ರಮ ಮರಳು ಸಾಗಾಟ: ನಾಲ್ವರು, 2 ಲಾರಿ ವಶಕ್ಕೆ
Update: 2019-11-21 16:30 GMT
ಬೈಂದೂರು, ನ.21: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳು ಹಾಗೂ ಎರಡು ಲಾರಿಗಳನ್ನು ಬೈಂದೂರು ಪೊಲೀಸರು ನ.20 ರಂದು ರಾತ್ರಿ 11.30ರ ಸುಮಾರಿಗೆ ಶಿರೂರು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕಿಟ್ಟಿ ಕೃಷ್ಣಮೂರ್ತಿ, ಅಶ್ವತ್ ನಾರಾಯಣ, ಶಶಿಕುಮಾರ ಹಾಗೂ ಶಾಕರ್ ಬಂಧಿತ ಆರೋಪಿಗಳು. ಮಂಗಳೂರು ಪಣಂಬೂರಿನಲ್ಲಿ ಮರಳನ್ನು ಈ ಲಾರಿಗಳಿಗೆ ತುಂಬಿಸಿ ಅಕ್ರಮವಾಗಿ ಭಟ್ಕಳಕ್ಕೆ ಸಾಗಿಸುತ್ತಿದ್ದರೆನ್ನಲಾಗಿದೆ.
20 ಲಕ್ಷ ರೂ. ಮೌಲ್ಯದ ಲಾರಿಯಲ್ಲಿದ್ದ 40 ಸಾವಿರ ರೂ. ಮೌಲ್ಯದ 9 ಯುನಿಟ್ ಮರಳು ಮತ್ತು 22 ಲಕ್ಷ ರೂ. ಮೌಲ್ಯದ ಲಾರಿಯಲ್ಲಿದ್ದ 45 ಸಾವಿರ ರೂ. ಮೌಲ್ಯದ 10 ಯುನಿಟ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ