ಟಿಪ್ಪರ್ ಕಳವು ಪ್ರಕರಣ : ಆರೋಪಿ ಸೆರೆ

Update: 2019-11-21 17:23 GMT

ಬಜ್ಪೆ : ಎಡಪದವಿ ನಲ್ಲಿ ನಡೆದಿದ್ದ ಟಿಪ್ಪರ್ ಕಳವು ಪ್ರಕರಣದ ಆರೋಪಿಯೋರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ತೆಂಕ ಎಡಪದವಿನ, ಸರ್ವಿಸ್ ಸ್ಟೇಷನ್ ನಲ್ಲಿ ನಿಲ್ಲಿಸಲಾಗಿದ್ದ ಎಡಪದವು ಯಂ ಶರೀಫ್ ಎಂಬವರಿಗೆ ಸೇರಿದ್ದ ಟಿಪ್ಪರ್ ಲಾರಿಯನ್ನು 2013ರ ಎಪ್ರಿಲ್ ನಲ್ಲಿ ಕಳವು ಮಾಡಲಾಗಿತ್ತು.

ಈ  ಪ್ರಕರಣದಲ್ಲಿ ಒಟ್ಟು ಮೂವರು ಭಾಗಿಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಇನ್ನೋರ್ವ ಆರೋಪಿಯಾಗಿದ್ದ ಕಾರ್ಕಳ ಆನಂದ ನಗರದ ನಿವಾಸಿ  ಅಶ್ರಫ್ (41)ತಲೆ ಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯ  ಬಂಧನ ವಾರಂಟ್ ಹೊರಡಿಸಿತ್ತು. ಈತನನ್ನು ಗುರುವಾರ ಕಾರ್ಕಳದಲ್ಲಿ ಬಂಧಿಸಲಾಗಿದೆ.

ಈತನ ವಿರುದ್ಧ ಬೆಂಗಳೂರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 14 ಪ್ರಕರಣಗಳು, ಕಾರ್ಕಳದಲ್ಲಿ 2, ಪಡುಬಿದ್ರಿ, ಮತ್ತು ಪಣಂಬೂರು ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News