ಮಂಗಳೂರು : ಇಂದು ಎಚ್.ಐ.ಎಫ್ ಸೀರತ್ ಅಭಿಯಾನ ಉದ್ಘಾಟನೆ

Update: 2019-11-21 18:06 GMT

ಮಂಗಳೂರು, ನ. 22 : ಪ್ರವಾದಿ ಮುಹಮ್ಮದ್ (ಸ ಅ) ಜೀವನ ಮತ್ತು ಸಂದೇಶ ಪ್ರಚಾರ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ 'ನೇಬರ್ಸ್ ಗೆಟ್ ಟುಗೆದರ್ ' (ನೆರೆಹೊರೆಯವರ ಸ್ನೇಹಕೂಟ) ಸರ್ವಧರ್ಮೀಯರಿಗೆ ಭಾಷಣ ಕಾರ್ಯಕ್ರಮವನ್ನು ನ.22 (ಶುಕ್ರವಾರ) ರಂದು ಹಮ್ಮಿಕೊಂಡಿದೆ. 

ಸಂಜೆ 4.30ಕ್ಕೆ ವಾಸ್ ಲೇನ್ ಮೊದಲ ಅಡ್ಡರಸ್ತೆಯಲ್ಲಿರುವ  ಹೈಲ್ಯಾಂಡ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅವರು ತಪ್ಪು ಕಲ್ಪನೆಗಳು ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಸಂತ ಜೋಸೆಫ್ ಸೆಮಿನರಿಯ ಫಾ. ಕ್ಲಿಫರ್ಡ್ , ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಆಶಾ ಲತಾ ಪೈ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಪ್ರತಿ ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ವಿವಿಧ ಧಾರ್ಮಿಕ ಪಂಡಿತರಿಂದ ಧಾರ್ಮಿಕ ಪ್ರವಚನ ನಡೆಯಲಿರುವುದು. ಕಾರ್ಯಕ್ರಮದ ಸಮಾರೋಪ ಸಮಾರಂಭವು ನಗರದ ಪುರಭವನದಲ್ಲಿ ಡಿ. 20 ರಂದು 6.30ಕ್ಕೆ ನಡೆಯಲಿರುವುದು ಎಂದು ಕಾರ್ಯಕ್ರಮದ ಸಂಚಾಲಕ ಆದಿಲ್ ಫರ್ವೇಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News