ನೀರುಮಾರ್ಗದಲ್ಲಿ ಟಿಪ್ಪರ್ ಪಲ್ಟಿ: ಓರ್ವ ಮೃತ್ಯು, ಮೂವರಿಗೆ ಗಾಯ
Update: 2019-11-22 08:43 GMT
ಮಂಗಳೂರು, ನ.22: ಗೊಬ್ಬರ ಸಾಗಿಸುತ್ತಿದ್ದ ಟಿಪ್ಪರ್ ವೊಂದು ಉರುಳಿಬಿದ್ದ ಪರಿಣಾಮ ಓರ್ವ ಮೃತಪಟ್ಟು ಮೂವರು ಗಾಯಗೊಂಡ ಘಟನೆ ನೀರುಮಾರ್ಗ ಸಮೀಪದ ಪಡು ಚಿಲ್ಪಾಡಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಲೋಕನಾಥ್ ಕುಟ್ಟಿಕಳ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ.
ಲೋಕನಾಥ್ ಉರುಳಿಬಿದ್ದ ಟಿಪ್ಪರ್ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಅವರನ್ನು ಮೇಲೆತ್ತಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.