ಕೆಎಸ್‌ಸಿಎ ಕ್ರಿಕೆಟ್: ಕುಂದಾಪುರದ ವೆಂಕಟರಮಣಕ್ಕೆ ಜಯ

Update: 2019-11-22 16:42 GMT

ಮಣಿಪಾಲ, ನ.22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದಿರುವ ಉಡುಪಿ ಜಿಲ್ಲಾ ಅಂತರ್ ಪ್ರೌಢ ಶಾಲಾ ಮತ್ತು ಅಂತರ್ ಪ.ಪೂ. ಕಾಲೇಜು ಕ್ರಿಕೆಟ್ ಪಂದ್ಯಾಟಗಳಲ್ಲಿ ಉಡುಪಿಯ ಇಎಂಎಚ್‌ಎಸ್ ಪ್ರೌಢ ಶಾಲಾ ತಂಡವು, ಮಾಬುಕಳದ ಚೇತನಾ ಪ್ರೌಢ ಶಾಲಾ ತಂಡವನ್ನು ಏಳು ವಿಕೆಟ್‌ಗಳಿಂದ ಪರಾಭವಗೊಳಿಸಿತು.

ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಕುಂದಾಪುರದ ವೆಂಕಟರಮಣ ಪಿ.ಯು.ಕಾಲೇಜು ತಂಡವು, ಕಾಪುವಿನ ದಂಡತೀರ್ಥ ಪಿ.ಯು. ಕಾಲೇಜು ತಂಡವನ್ನು 50 ರನ್‌ಗಳ ಅಂತರದಿಂದ ಸೋಲಿಸಿತು.

ಉಡುಪಿಯ ಶಾರದಾ ವಸತಿ ಶಾಲಾ ತಂಡವು, ಕುಂಜಾರುಗಿರಿ ಆನಂದ ತೀರ್ಥ ವಿದ್ಯಾಲಯ ತಂಡದ ವಿರುದ್ಧ 66 ನ್‌ಗಳ ಅಂತರದ ಜಯ ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News