ಅವಿವಾಹಿತ ಸಂಶಯಾಸ್ಪದವಾಗಿ ಮೃತ್ಯು: ದೂರು

Update: 2019-11-22 16:46 GMT

ಕಾರ್ಕಳ, ನ.22: ಕಲ್ಯಾ ಗ್ರಾಮದ ಕುಂಟಾಡಿಯ ಪಟ್ಲ ನ.21ರಂದು ರಾತ್ರಿ ವೇಳೆ ವ್ಯಕ್ತಿಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಮಾಳ ಗ್ರಾಮದ ಮಂಜಲ್ತಾರ್ ನಿವಾಸಿ ಅಣ್ಣಪ್ಪಎಂಬವರ ಮಗ ಹರೀಶ್ ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ಇವರು ನ.21ರಂದು ಮನೆಯಿಂದ ಕೂಲಿ ಕೆಲಸಕ್ಕೆ ಹೋಗಿದ್ದು, ರಾತ್ರಿ ವಾಪಾಸ್ಸು ಮನೆಗೆ ಬಂದಿರಲಿಲ್ಲ. ಹರೀಶ್‌ಗೆ ಕಲ್ಯಾ ಗ್ರಾಮದ ಕುಂಟಾಡಿಯ ಪಟ್ಲದ ವಿವಾಹಿತೆ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯ ಮನೆಗೆ ಅವರು ಆಗಾಗೆ ಹೋಗಿ ಬರುತ್ತಿದ್ದರೆನ್ನಲಾಗಿದೆ.

ಈ ಮಹಿಳೆಯ ಮನೆಯ ಬಳಿಯ ಹೊಳೆ ಬದಿಯಲ್ಲಿ ಇಂದು ಬೆಳಗ್ಗೆ ಹರೀಶ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇವರ ಮರಣಲ್ಲಿ ಸಂಶಯ ಇರುವುದಾಗಿ ಮೃತರ ತಂದೆ ಅಣ್ಣಪ್ಪ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News