ಭ್ರಷ್ಟಾಚಾರಿ ಎನ್‍ ಸಿಪಿ ಜತೆ ಎಂದೆಂದಿಗೂ ಮೈತ್ರಿಯಿಲ್ಲ ಎಂದು ಹೇಳಿದ್ದ ಫಡ್ನವೀಸ್: ಟ್ವೀಟ್ ವೈರಲ್

Update: 2019-11-23 11:50 GMT

ಮುಂಬೈ: ಇಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ  ಐದು ವರ್ಷಗಳ ಹಿಂದೆ ಫಡ್ನವೀಸ್ "ಬಿಜೆಪಿ ಎಂದಿಗೂ, ಎಂದಿಗೂ, ಎಂದಿಗೂ ಎನ್‍ ಸಿಪಿ ಜತೆ ಮೈತ್ರಿ ಸಾಧಿಸುವುದಿಲ್ಲ" ಎಂದಿದ್ದ ಟ್ವೀಟ್ ಒಂದು ವೈರಲ್ ಆಗಿದೆ.

ಎನ್‍ ಸಿಪಿ ಭ್ರಷ್ಟ ಪಕ್ಷ ಎಂಬುದು ಅವರು ಇದಕ್ಕೆ ನೀಡಿದ ಕಾರಣವಾಗಿತ್ತು.

"ಬಿಜೆಪಿ ಎಂದಿಗೂ, ಎಂದಿಗೂ, ಎಂದಿಗೂ ಎನ್‍ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ವದಂತಿಗಳು ಪೂರ್ವಾಗ್ರಹ ಪೀಡಿತ. ಅವರ ಭ್ರಷ್ಟಾಚಾರವನ್ನು ನಾವು ವಿಧಾನಸಭೆಯಲ್ಲಿ ಬಯಲುಗೊಳಿಸಿದ್ದೇವೆ. ಇತರರು ಮೌನವಾಗಿದ್ದರು'' ಎಂದು ಸೆಪ್ಟೆಂಬರ್ 2014ರಲ್ಲಿ ಮಾಡಿದ ಟ್ವೀಟ್‍ನಲ್ಲಿ ಫಡ್ನವೀಸ್ ಹೇಳಿದ್ದರು.

ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರಾಗಿದ್ದ ವೇಳೆ ನಡೆದಿತ್ತೆನ್ನಲಾದ 20,000 ಕೋಟಿ ರೂ. ನೀರಾವರಿ ಹಗರಣದಲ್ಲಿ ಆರೋಪಗಳನ್ನೆದುರಿಸುತ್ತಿರುವ ಅಜಿತ್ ಪವಾರ್ ಅವರ ವಿರುದ್ಧ ಚುನಾವಣಾ ಪ್ರಚಾರ ಸಂದರ್ಭ ಬಿಜೆಪಿ ಹರಿಹಾಯ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News