ಉಚಿತ ಚರ್ಮರೋಗ, ಹೃದಯ ರೋಗ ತಪಾಸಣಾ ಶಿಬಿರ
Update: 2019-11-24 19:54 IST
ಉಡುಪಿ, ನ.24: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಧನ್ವಂತರಿ ಚಿಕಿತ್ಸಾಲಯ, ಲಯನ್ಸ್ ಕ್ಲಬ್ ಅಂಬಲಪಾಡಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಇವುಗಳ ಸಹಯೋಗದೊಂದಿಗೆ ಬೃಹತ್ ಉಚಿತ ಚರ್ಮ ರೋಗ ಹಾಗೂ ಹೃದಯ ರೋಗ ತಪಾಸಣಾ ಶಿಬಿರವನ್ನು ರವಿವಾರ ಮಠದ ರಾಜಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಸತೀಶ್ ಪೈ, ಡಾ.ಸುಧೀರ್ ನಾಯಕ್, ಡಾ.ನಿಶಾಂತ್ ಶೆಟ್ಟಿ, ಡಾ.ರವೀಂದ್ರ, ಡಾ.ನರಸಿಂಹ ರಾವ್ ಮತ್ತು ಪಿ.ಎಲ್.ಭಟ್, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.