ಕಿನ್ನಿಗೋಳಿ: ಮೀಲಾದುನ್ನಬಿ ಕಾರ್ಯಕ್ರಮ

Update: 2019-11-25 11:53 GMT

ಕಿನ್ನಿಗೋಳಿ: ಮುಹಮ್ಮದಿಯ್ಯಾ ಜುಮ್ಮಾ ಮಸೀದಿ ಪುನರೂರು ಹಾಗೂ ಮುಹಿಯುದ್ದೀನ್ ಯಂಗ್ ಮೆನ್ಸ್ ಅಸೋಸಿಯೇಶನ್ ಇದರ ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ)ರ  ಜನ್ಮ ಮಾಸಾಚರಣೆ ಪ್ರಯುಕ್ತ ಮೀಲಾದುನ್ನಬಿ ಸಮಾರಂಭ ಹಾಗೂ ಮದ್ರಸ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮವು ಗೋಳಿಜೋರದ ಮುಹಮ್ಮದೀಯಾ ಮದ್ರಸ ಆವರಣದಲ್ಲಿ ನಡೆಯಿತು.

ಮಿಸ್ಬಾಹುಲ್ ಮದೀನಾ ವಿದ್ಯಾಸಂಸ್ಥೆ ಕಲ್ಕರೆ ಇದರ ಪ್ರಾಂಶುಪಾಲ ಶೈಖುನಾ ಎ.ಪಿ. ಅಬ್ದುಲ್ಲಾ ಮದನಿ ಅಳಕೆ ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ನಡೆಯಿತು.‌ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮುಹಮ್ಮದಿಯ್ಯಾ ಜುಮ್ಮಾ ಮಸೀದಿ ಪುನರೂರು  ಖತೀಬ್ ಬಶೀರ್ ಮದನಿ ನೆರವೇರಿಸಿದರು. ಇದೇ ಸಂದರ್ಭ ಮದ್ರಸ ಶಿಕ್ಷಕರಾದ ಎಂಜೆಎಂ ಪುನರೂರು ಮುಅಲ್ಲಿಂ ಸಜ್ಜಾದ್ ಆಲಂ ನೂರಿ ಹಾಗೂ ಬಶೀರ್ ಮದನಿ ಅವರನ್ನು ಸನ್ಮಾನಿಸಲಾಯಿತು‌.

ಕೃಷ್ಣಾಪುರ ಮಸೀದಿಯ ಮುದರ್ರಿಸ್ ನವಾಝ್ ಸಖಾಫಿ ಅಲ್ ಅಝ್ಹರಿ ಮುಖ್ಯ ಪ್ರಭಾಷಣಗೈದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಂಜೆಎಂ ಪುನರೂರು ಅಧ್ಯಕ್ಷ ಸಿದ್ದೀಕ್ ಪುನರೂರು ವಹಿಸಿದ್ದರು‌. ವೇದಿಕೆಯಲ್ಲಿ ಕಿನ್ನಿಗೋಳಿ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಸಖಾಫಿ, ಖಿಲ್ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು ಖತೀಬ್ ಉಮರುಲ್ ಫಾರೂಕ್ ಸಖಾಫಿ, ಎಂಜೆಎಂ ಪುನರೂರು ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಮಿಲನ್, ಉಪಾಧ್ಯಕ್ಷ ಇಕ್ಬಾಲ್, ಕಾರ್ಯದರ್ಶಿ ಇಬ್ರಾಹಿಂ ಶೇಖ್, ಕೆಜೆಎಂ ಗುತ್ತಕಾಡು ಅಧ್ಯಕ್ಷ ಅಬ್ದುರ್ರಹ್ಮಾನ್, ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ರಫೀಕ್ ಫ್ಲವರ್ ಗೋಳಿಜೋರ, ಮುಹಿಯುದ್ದೀನ್ ಯಂಗ್ ಮೆನ್ಸ್ ಪುನರೂರು ಅಧ್ಯಕ್ಷ ಉಮರುಲ್ ಫಾರೂಕ್ ಪುನರೂರು, ಕಾರ್ಯದರ್ಶಿ ಮುಬಾರಕ್ ಪುನರೂರು, ಮಿಸ್ಬಾಹುಲ್ ಮದೀನಾ ಕಲ್ಕರೆ ಚೇಯರ್ ಮೆನ್ ಹಸನ್ ಸಖಾಫಿ, ಅಮೀರ್ ಗೋಳಿಜೋರ ಉಪಸ್ಥಿತರಿದ್ದರು. ಝುನೈದ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News