ಸೊಸೈಟಿ ಕಾರ್ಯದರ್ಶಿ ನಾಪತ್ತೆ

Update: 2019-11-26 17:07 GMT

ಬ್ರಹ್ಮಾವರ, ನ.26: ಸೊಸೈಟಿಯ ಹಣಕಾಸಿನ ಲೆಕ್ಕದಲ್ಲಿ ವ್ಯತ್ಯಾಸ ಉಂಟಾದ ಬಗ್ಗೆ ಚಿಂತೆಗೆ ಒಳಗಾದ ನೀರ್ಜೆಡ್ಡು ಹೊಳೆಬಾಗಿಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಾರ್ಯದರ್ಶಿ ಜಯಂತಿ (40) ಎಂಬವು ನ.25ರಂದು ನಾಪತ್ತೆಯಾಗಿದ್ದಾರೆ.

ಹೊಳೆಬಾಗಿಲುಗುಡ್ಡೆ ನಿವಾಸಿಯಾಗಿರುವ ಇವರು ಇತ್ತಿಚೆಗೆ ಆರೋಗ್ಯ ಸಮಸ್ಯೆಯಿಂದ ನೊಂದುಕೊಂಡಿದ್ದು, ಅದೇ ರೀತಿ ಹಾಲು ಡೈರಿಯಲ್ಲಿ ಹಣ ಕಾಸಿನ ಲೆಕ್ಕದಲ್ಲಿ ವ್ಯತ್ಯಾಸ ಉಂಟಾಗಿರುವ ಬಗ್ಗೆಯೂ ಚಿಂತೆಗೀಡಾಗಿದ್ದರು. ನ.25ರಂದು ಬೆಳಗ್ಗೆ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಪಾಸ್‌ಬುಕ್ ತರಲೆಂದು ಹೇಳಿ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News