ಕಾನಂಗಿ ಬಾಲಕೃಷ್ಣ ರಾವ್ ನಿಧನ
Update: 2019-11-28 19:04 IST
ಉಡುಪಿ, ನ.28: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಹಾಗೂ ವಕೀಲರಾಗಿದ್ದ ಕಾನಂಗಿ ಬಾಲಕೃಷ್ಣ ರಾವ್ (70) ಬುಧವಾರ ನಿಧನರಾದರು.
ಕೊಡವೂರು ಯುವಕ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಶಂಕರನಾರಾಯಣ ನಾಟಕ ಮಂಡಳಿ, ಭಕ್ತವೃಂದ, ಭಜನಾ ಮಂಡಳಿ ಹಾಗೂ ಯಕ್ಷಗಾನ ಮಂಡಳಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ಶ್ರೇಷ್ಠ ನಾಟಕ ನಿರ್ದೇಶಕ ಹಾಗೂ ನಟರಾಗಿದ್ದರು.
ಕಲ್ಮಾಡಿ ಭಗವತಿ ಮಾರಿಯಮ್ಮನ ಗುಡಿ ಟ್ರಸ್ಟ್ ಅಧ್ಯಕ್ಷರಾಗಿದ್ದ ಇವರು, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಮುಖ್ಯ ಆಯುಕ್ತರಾಗಿದ್ದರು. ಇವರ ನಿಧನಕ್ಕೆ ಕೇಂದ್ರ ಸಚಿವ ಸದಾನಂದಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.