×
Ad

​ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2019-11-28 21:42 IST

 ಕುಂದಾಪುರ, ನ.28: ಮಗಳ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಹೊಸಮಠ ವಿಶ್ವಾಸ ಗೇರು ಬೀಜ ಕಾರ್ಖಾನೆ ಹತ್ತಿರ ನಡೆದಿದೆ.

ಮೃತರನ್ನು ಕೊರ್ಗಿ ಗ್ರಾಮದ ಕಮಲ (45) ಎಂದು ಗುರುತಿಸಲಾಗಿದೆ. ಇವರು ನ.27ರಂದು ಬೆಳಗ್ಗೆ ತನ್ನ ಮಗಳ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ನ.28ರಂದು ಬೆಳಗ್ಗೆ ಇವರ ಮೃತದೇಹವು ಹೊಸಮಠ ವಿಶ್ವಾಸ ಗೇರು ಬೀಜ ಕಾರ್ಖಾನೆ ಹತ್ತಿರ ಆವರಣ ಇಲ್ಲದ ಬಾವಿಯಲ್ಲಿ ಪತ್ತೆ ಯಾಗಿದೆ. ಇವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News