ನ.29: ಕೆಸಿಎಫ್ ಸೀಬ್, ಬೌಷರ್ ಝೋನ್ ವತಿಯಿಂದ 'ಅರ್ರಿಬಾತ್-19'

Update: 2019-11-28 18:12 GMT

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮನ್ ಇದರ ಸೀಬ್ ಮತ್ತು ಬೌಷರ್ ಝೋನ್ ಗಳ ಜಂಟಿ ಆಶ್ರಯದಲ್ಲಿ ಅರ್ರಿಬಾತ್-19 ಎಂಬ ವಿಶೇಷ ಕಾರ್ಯಕ್ರಮವು ನಡೆಯಲಿದೆ.

ನ. 29 ರಂದು ಸಂಜೆ 7ಕ್ಕೆ, ಸೀಬ್ ವೇವ್ಸ್ ರೆಸ್ಟೋರೆಂಟ್ ಅಲ್ ಹೇಲ್ ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಇಹ್ಸಾನ್ ನ ಹೆಜ್ಜೆಗುರುತುಗಳು ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿಯ ನೇತಾರರು ಸೇರಿದಂತೆ ವಿವಿಧ ಝೋನ್ ನಾಯಕರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ಕೆ.ಸಿ.ಎಫ್ ಸೀಬ್ ಝೋನ್ ನ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News