ಪಡುಬಿದ್ರೆ ಬಸ್ ನಿಲ್ದಾಣಕ್ಕೆ ನುಗ್ಗಿದ ಕಾರು: ಏಳು ಮಂದಿಗೆ ಗಾಯ

Update: 2019-11-29 14:01 GMT

ಪಡುಬಿದ್ರೆ: ಉಡುಪಿ ಕಡೆಗೆ ಹೋಗುವ ಪಡುಬಿದ್ರೆಯ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಘಟನೆಯಿಂದ ಇಲ್ಲಿನ ನಿವಾಸಿಗಳಾದ ರಿಝ್ವಾನ್ (3), ರಿಯಾನ್ (5), ರಮ್ಲತ್ (29), ಝೈನಬಿ(38), ರಫೀಝಾ(18) ಮಂಗಳೂರಿನ ಬಾಲಕ ಯಶಸ್ಸ್ (8) ಹಾಗೂ ಉತ್ತರಪ್ರದೇಶ ಮೂಲದ ಪಾನ್‌ವಾಲಾ ಗೊಳೇಲ್ ಯಾದವ್ (34) ಎಂದು ಗುರುತಿಸಲಾಗಿದೆ. ಇವರೆಲ್ಲರಿಗೂ ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಗಾಯಾಳುಗಳಲ್ಲಿ ಗೊಳೇಲ್ ಅವರಿಗೆ ಬಸ್ ನಿಲ್ದಾಣದಲ್ಲಿ ಪಾನ್ ಅಂಗಡಿಯಿದ್ದು, ಉಳಿದವರು ಬಸ್‌ಗಾಗಿ ಕಾಯುತಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News