ಭಟ್ಕಳ: ಡಿ.1ರಂದು ಬೇಂಗ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2019-11-29 17:08 GMT

ಭಟ್ಕಳ: ಮಹಾನಸ ಆಯುರ್ವೇದ ಚಿಕಿತ್ಸಾ ಕೇಂದ್ರ ಬೆಂಗಳೂರು, ಆರೋಗ್ಯ ಭಾರತಿ ಭಟ್ಕಳ ,ಉಸಿರಾ ಇಂಡಸ್ಟ್ರೀಸ್ ಬೆಂಗ್ರೆ , ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಲಿ ಕಾರವಾರ ಮತ್ತು ಸಾಧನಾ ಮಹಿಳಾ ಒಕ್ಕೂಟ ಬೆಂಗ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ನುರಿತ ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಡಿ.1 ರಂದು  ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ  ಉಸಿರಾ ಇಂಡಸ್ಟ್ರಿಸ್ ಬೆಂಗ್ರೆ ಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು  ತಿಳಿಸಿದ್ದಾರೆ.

ಶಿಬಿರದಲ್ಲಿ ಕ್ಯಾನ್ಸರ್, ಮೂಲವ್ಯಾದಿ, ಗಂಟು ನೋವು ಕೀಲುನೋವು ಕಾಮಾಲೆ ಕಿಡ್ನಿ ಕಲ್ಲು ರಕ್ತಹೀನತೆ ಮೂತ್ರ ಉರಿ,  ಉಬ್ಬಸ,  ಕೆಮ್ಮು , ಸಕ್ಕರೆ ಕಾಯಿಲೆ, ರಕ್ತ ಪರೀಕ್ಷೆ, ರಕ್ತ ಒತ್ತಡ ಪರೀಕ್ಷೆ , ತಜ್ಞವೈದ್ಯರಿಂದ ಉಚಿತ ಸಮಾಲೋಚನೆ ಸಲಹೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಘಟಕರಾದ ಕೆ. ಮರಿಸ್ವಾಮಿ (9448235284), ಎಂ ಡಿ ಮ್ಯಾಥ್ಯೂ (9448629439) ಮತ್ತು ಫೆಲಿಕ್ಸ್ ಫರ್ನಾಂಡಿಸ್ (9972050728) ಇವರನ್ನ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News