​ಅಕ್ರಮ ಮರಳು ಸಾಗಾಟ: ವಾಹನ, ಚಾಲಕ ವಶಕ್ಕೆ

Update: 2019-11-30 16:55 GMT

ಕಾರ್ಕಳ, ನ.30: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನ ಮತ್ತು ಅದರ ಚಾಲಕನನ್ನು ಕಾರ್ಕಳ ಪೊಲೀಸರು ನ.28ರಂದು ಸಂಜೆ ವೇಳೆ ಹಿರ್ಗಾನ ಗ್ರಾಮದ ಮಲಪಲಬೆಟ್ಟು ಎಂಬಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ರೋಹಿತ್ ಹೆಗ್ಡೆ, ಸುರೇಶ, ರತ್ನಾಕರ ಎಂಬವರು ಕಲ್ಕಾರ್ ಎಂಬಲ್ಲಿರುವ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಈಚರ್ ವಾಹನಕ್ಕೆ ತುಂಬಿಸಿ ಚಿಕ್ಕಾಲ್ಬೆಟ್ಟು ಕಡೆಯಿಂದ ನೆಲ್ಲಿಕಟ್ಟೆ ಕಡೆಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಚಾಲಕ ರೋಹಿತ್ ಹೆಗ್ಡೆಯನ್ನು ಬಂಧಿಸಿ, 4,000ರೂ. ವೌಲ್ಯದ ಮರಳು ಹಾಗೂ 3,00,000 ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News