ಬೆಳ್ಳೆ ಪದ್ಮನಾಭ ನಾಯಕ್‌ಗೆ ಕೆಕೆ ಹೆಬ್ಬಾರ್ ಹುಟ್ಟೂರ ಪ್ರಶಸ್ತಿ ಪ್ರದಾನ

Update: 2019-12-01 14:15 GMT

ಶಿರ್ವ, ಡಿ.1: ಎಡ್ಮೇರು ನಿಸರ್ಗ ಯುವಕ ಮಂಡಲದ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ರೇಖಾಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್ ಸ್ಮರಣಾರ್ಥ ನೀಡಲಾಗುವ ಹುಟ್ಟೂರ ಪ್ರಶಸ್ತಿಯನ್ನು ಚಿತ್ರ, ಯಕ್ಷಗಾನ ಕಲಾವಿದ, ಶಿಕ್ಷಕ ಬೆಳ್ಳೆ ಪದ್ಮನಾಭ ನಾಯಕ್ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.

ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜನಿ ಹೆಗ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳ್ಳೆ ಗ್ರಾಪಂ ಸ್ವಚ್ಛಾಗ್ರಹಿ ಗಳಾಗಿರುವ ವಸಂತ, ಸುಂದರ, ಮೆಸ್ಕಾಂನ ಹಿರಿಯ ಲೈನ್‌ಮನ್, ಆಪದ್ಬಾಂಧವ ಶಿವರಾಮ ಅವರನ್ನು ಸನ್ಮಾನಿಸಲಾಯಿತು.

ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಕಟ್ಟಿಂಗೇರಿ ದೇಗುಲದ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಶುಭ ಹಾರೈಸಿ ದರು. ತಾಪಂ ಸದಸ್ಯೆ ಸುಜಾತಾ ಶಂಕರ ಸುವರ್ಣ, ಬೆಳ್ಳೆ ಗ್ರಾಪಂ ಸದಸ್ಯ ಗುರುರಾಜ್ ಟ್, ನಿವೃತ್ತ ಮುಖ್ಯ ಶಿಕ್ಷಕ ವಿವೇಕಾನಂದ ಶೆಟ್ಟಿ, ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ, ಸಂಘದ ಗೌರವಾಧ್ಯಕ್ಷ ನಾಗೇಶ್ ನಾಯಕ್, ಅಧ್ಯಕ್ಷ ಶ್ರೀಕಾಂತ್ ಆಚಾರ್ಯ, ಕಾರ್ಯದರ್ಶಿ ಅಕ್ಷಿತ್ ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಸಂತೋಷ್ ಕುಮಾರ್ ಮೂಡುಬೆಳ್ಳೆ ಸ್ವಾಗತಿಸಿದರು. ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸಮ್ಮಾನಿತ ರನ್ನು ಪರಿಚಯಿಸಿದರು. ಸುಕೇಶ ಪೂಜಾರಿ ವಂದಿಸಿದರು. ಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News