ಮುಲ್ಕಿ: ಚಂದ್ರಶೇಖರ ಸುವರ್ಣ ಪುತ್ರಿಯ ವಿವಾಹದಲ್ಲಿ ಚಂದ್ರಶೇಖರ ಸ್ವಾಮೀಜಿ

Update: 2019-12-02 11:40 GMT

ಮುಲ್ಕಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಮುಲ್ಕಿಯ ಸುವರ್ಣ ಆರ್ಟ್ಸ್ ನ ಮಾಲಕ ಚಂದ್ರಶೇಖರ ಸುವರ್ಣ ಅವರ ಪುತ್ರಿ ದೀಕ್ಷಾರ ವಿವಾಹವು ಮನೀಶ್ ರೊಂದಿಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಬೆಂಗಳೂರಿನ ಅಂತರ್ ರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ, ಮುಲ್ಕಿಯ ಕಿಲ್ಪಾಡಿ ಚಂದ್ರಶೇಖರ ಸ್ವಾಮಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್ ಅವರು ವಧು ವರರನ್ನು ಆಶೀರ್ವದಿಸಿದರು.

ಈ ಸಂದರ್ಭ ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಅವರು ಚಂದ್ರಶೇಖರ ಸ್ವಾಮೀಜಿಯನ್ನು ದೇವಳದ ವತಿಯಿಂದ ಗೌರವಿಸಿದರು. ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಖ್ಯಾತ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ದೇವಳದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಗಗನ್ ಸುವರ್ಣ, ಸಿಬ್ಬಂದಿಗಳಾದ ಶಿವಶಂಕರ್, ಕಾರ್ತಿಕ್ ಬಪ್ಪನಾಡು, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ಹರೀಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News