ಪುತ್ತೂರು ವಿವಾಹಿತ ಆತ್ಮಹತ್ಯೆ
Update: 2019-12-02 12:13 GMT
ಪುತ್ತೂರು: ವಿವಾಹಿತ ವ್ಯಕ್ತಿಯೊಬ್ಬರು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಡ್ನೂರು ಗ್ರಾಮದ ರೋಟರಿಪುರ ಎಂಬಲ್ಲಿ ಸೋಮವಾರ ನಡೆದಿದೆ.
ರೋಟರಿಪುರದ ದಿ. ಜಗನ್ನಾಥ ರಾವ್ ಎಂಬವರ ಪುತ್ರ ನಾರಾಯಣ ರಾವ್ (35) ಮೃತಪಟ್ಟವರು. ಇವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ, ಪುಟ್ಟ ಮಗು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.