ದೇರೆಬೈಲ್ ದಕ್ಷಿಣ ವಾರ್ಡ್‌ನ ಅಭಿವೃದ್ಧಿಗೆ ವಿಶೇಷ ಅನುದಾನ : ಶಾಸಕ ಕಾಮತ್

Update: 2019-12-03 16:50 GMT

ಮಂಗಳೂರು : ಮನಪಾ ವ್ಯಾಪ್ತಿಯ ದೇರೆಬೈಲ್ ದಕ್ಷಿಣ ವಾರ್ಡ್‌ನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, 98.43 ಲಕ್ಷ ರೂ. ವೆಚ್ಚದಲ್ಲಿ ವಿವಿಧ 21 ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಳೆಹಾನಿ ಪರಿಹಾರ ನಿಧಿಯಡಿ 15 ಲಕ್ಷ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ತಾರಾ ಅಪಾರ್ಟ್‌ಮೆಂಟ್‌ನ 2ನೇ ಅಡ್ಡರಸ್ತೆ, ಗುಡ್ಡೆರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ, ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆ, ಬಾಬು ಕಾಂಪೌಂಡ್, ಬಿಜೈ ಕಾಪಿಕಾಡ್ ಬಳಿ ತೋಡು ದುರಸ್ತಿ ಕಾಮಗಾರಿಗೆ 5 ಲಕ್ಷ ರೂ., ರಾಮಾಂಜನೇಯ ಭಜನಾ ಮಂದಿರದ ಬಳಿಯ ರಸ್ತೆ ಡಾಮರೀಕರಣ ಕಾಮಗಾರಿ 5 ಲಕ್ಷ ರೂ.ಮೀಸಲಿಡಲಾಗಿದೆ.

ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ದೇರೆಬೈಲ್ ದಕ್ಷಿಣ ವಾರ್ಡಿಗೆ 37.13 ಲಕ್ಷ ರೂ. ಅನುದಾನ ನೀಡಿದ್ದು, ಆ ಅನುದಾನದಲ್ಲಿ ದಡ್ಡಲಕಾಡು ಒಳಚರಂಡಿ ಅಭಿವೃದ್ಧಿಗೆ 6 ಲಕ್ಷ ರೂ., ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆಯ ಬಳಿ ಒಳಚರಂಡಿ ಅಭಿವೃದ್ಧಿಗೆ 4.72 ಲಕ್ಷ ರೂ., ದಡ್ಡಲಕಾಡು ಕೊರಗಜ್ಜ ಗುಡಿ ಒಳಚರಂಡಿ ಅಭಿವೃದ್ಧಿಗೆ 1.67 ಲಕ್ಷ ರೂ, ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆಯಲ್ಲಿ ಒಳ ಚರಂಡಿ ಅಭಿವೃದ್ಧಿಗೆ 4.70 ಲಕ್ಷ ರೂ, ಕೋಟೆಕಣಿ 1ನೇ ಅಡ್ಡರಸ್ತೆಯಲ್ಲಿ ಕವಲೊಡೆದ ಅಡ್ಡರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ., ಕೋಟೆಕಣಿ 1ನೇ ಅಡ್ಡರಸ್ತೆಯ ಕೊನೆಯಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ 5 ಲಕ್ಷ ರೂ., ಪತಂಜಲಿ ಸ್ಟೋರ್ ಬಳಿ ಒಳಚರಂಡಿ ಅಭಿವೃದ್ಧಿಗೆ 4.68 ಲಕ್ಷ ರೂ., ದಡ್ಡಲಕಾಡು ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆ ಅಭಿವೃದ್ಧಿಗೆ 4.36 ಲಕ್ಷ ರೂ., ಕುದ್ಮುಲ್ ರಂಗರಾವ್ ಭವನದ ಉಳಿದ ಕಾಮಗಾರಿಗೆ 1 ಲಕ್ಷ ರೂ.ಅನುದಾನ ಒದಗಿಸಲಾಗಿದೆ.

ಪಾಲಿಕೆ ಸಾಮಾನ್ಯ ನಿಧಿಯಿಂದ 40.3 ಲಕ್ಷ ರೂ. ಬಿಡುಗಡೆಯಾಗಿದ್ದು, ಆ ಅನುದಾನದಲ್ಲಿ ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆ ಬಳಿ ಡ್ರೈನೇಜ್ ದುರಸ್ತಿಗೆ 2.72 ಲಕ್ಷ ರೂ., ವಿ.ಕೆ ಪಾರ್ಕ್ ಮುಂಭಾಗ ಕೋಟೆಕಣಿ 3ನೇ ಅಡ್ಡ ರಸ್ತೆ ದುರಸ್ತಿಗೆ 3.72 ಲಕ್ಷರೂ., ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆ ಬಳಿಯ ಕಾಪಿಕಾಡು 8 ಎ ರಸ್ತೆಯ ಕಾಂಕ್ರೀಟ್ ಕಾಮಗಾರಿ 5 ಲಕ್ಷ ರೂ., ಸಿರೆನೆ ಅಪಾರ್ಟ್‌ಮೆಂಟ್ ಬಳಿ ಒಳ ಚರಂಡಿಗೆ 4.93 ಲಕ್ಷ ರೂ., ಕಾಪಿಕಾಡ್ 8 ಎ ಅಡ್ಡ ರಸ್ತೆಯ ಕಾಂಕ್ರೀಟ್‌ಗೆ 5 ಲಕ್ಷ ರೂ., ಚಿಲಿಂಬಿಗುಡ್ಡೆಯ ಬಳಿ ಆಳುಗುಂಡಿ ದುರಸ್ತಿಗೆ 4.98 ಲಕ್ಷ ರೂ., ಕಾಪಿಕಾಡ್ 1ನೇ ಅಡ್ಡರಸ್ತೆಗೆ ಕಾಂಕ್ರಿಟೀಕರಣಕ್ಕೆ 7.40 ಲಕ್ಷ ರೂ., ಕಾಪಿಕಾಡ್ 1ನೇ ಅಡ್ಡರಸ್ತೆ ಚರಂಡಿ ಅಭಿವೃದ್ಧಿಗೆ 7 ಲಕ್ಷ ರೂ. ಮೀಸಲಿಡಲಾಗಿದೆ.

ಶಾಸಕರ ನಿಧಿಯಿಂದ ಚಿಲಿಂಬಿಗುಡ್ಡೆ ಗುರುವೈದ್ಯನಾಥ ದೇವಿ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಗೆ 6 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News