ಚೀನಾದೊಂದಿಗಿನ ಗಡಿ ಸುಭದ್ರವಾಗಿದೆ : ರಾಜನಾಥ ಸಿಂಗ್

Update: 2019-12-04 14:21 GMT

ಹೊಸದಿಲ್ಲಿ,ಡಿ.4: ಗಡಿ ವಿಷಯದಲ್ಲಿ ಭಾರತ ಮತ್ತು ಚೀನಾ ನಡುವೆ ಗ್ರಹೀತ ಭಿನ್ನಾಭಿಪ್ರಾಯಗಳಿವೆ,ಆದರೆ ಭಾರತೀಯ ಸೇನೆಯು ಕಟ್ಟೆಚ್ಚರವನ್ನು ವಹಿಸಿದೆ ಮತ್ತು ಗಡಿಗಳು ಸುಭದ್ರವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.

ಭಾರತದ ಗಡಿ ಪ್ರದೇಶಗಳುದ್ದಕ್ಕೂ ಚೀನಿಯರ ಚಟುವಟಿಕೆಗಳ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದ ಸಿಂಗ್,ಚೀನಿ ಪಡೆಗಳಿಂದ ಅತಿಕ್ರಮಣಗಳು ನಡೆಯುತ್ತಿರುತ್ತವೆ ಮತ್ತು ಭಾರತೀಯ ಪಡೆಗಳೂ ಗಸ್ತುಕಾರ್ಯಕ್ಕಾಗಿ ಮುಂಚೂಣಿ ಪ್ರದೇಶಗಳಿಗೆ ಹೋಗುತ್ತಿರುತ್ತವೆ. ನಮ್ಮ ಗಡಿಗಳು ಸುಭದ್ರವಾಗಿವೆ ಮತ್ತು ಪಡೆಗಳು ಕಟ್ಟೆಚ್ಚರದಲ್ಲಿವೆ. ಉಭಯ ದೇಶಗಳ ಸೇನೆಗಳು ಸಾಕಷ್ಟು ಪಕ್ವತೆಯನ್ನು ಹೊಂದಿದ್ದು, ತಮ್ಮ ನಡುವಿನ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News