ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ

Update: 2019-12-04 14:35 GMT

ಶಿರ್ವ, ಡಿ.4: ಮೂಡುಬೆಳ್ಳೆ ಸಂತಲಾರೆನ್ಸ್ ದೇವಾಲಯದ ಸೌಹಾರ್ದ ಸಭಾಂಗಣದಲ್ಲಿ ಡಿ.17ರಂದು ಜರಗಲಿರುವ ಕಾಪು ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ಪುಸ್ತಕ ಪ್ರಕಾಶಕರು/ ಮಳಿಗೆಯವರು ಸಮ್ಮೇಳನದ ಪ್ರಧಾನ ಕಾರ್ಯದರ್ಶಿ (98446 40011) ಅಥವಾ ತಾಲೂಕು ಅಧ್ಯಕ್ಷ(94482 52242)ರವರಿಗೆ ಡಿ.13ರ ಒಳಗೆ ತಿಳಿಸಿದ್ದಲ್ಲಿ ಪೀಠೋಪಕರಣಗಳೊಂದಿಗೆ ಉಚಿತ ಸ್ಥಳಾವಕಾಶ ಒದಗಿಸಿ ಕೊಡಲಾಗುವುದು. ಅದೇ ರೀತಿ ಚಿತ್ರಕಲಾ ಪ್ರದರ್ಶನಕ್ಕೂ ಅವಕಾಶವಿದೆ ಎಂದು ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಬಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News