ಶಿರ್ವ ಧರ್ಮಗುರು, ಬಿಷಪ್‌ಗೆ ಬೆದರಿಕೆ : 15 ಮಂದಿ ವಿರುದ್ಧ ಪ್ರಕರಣ ದಾಖಲು

Update: 2019-12-04 15:57 GMT

ಶಿರ್ವ, ಡಿ.4: ಧರ್ಮಗುರು ಫಾ.ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಶಿರ್ವ ಸಾವುದ್ ಅಮ್ಮನವರ ಚರ್ಚನ ಧರ್ಮಗುರು ಫಾ.ಡೆನ್ನೀಸ್ ಡೇಸಾ(55) ಅವರಿಗೆ ಜೀವ ಬೆದರಿಕೆಯೊಡ್ಡಿದ 15 ಮಂದಿ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.2ರಂದು ಸಂಜೆ ವೇಳೆ ಚರ್ಚ್‌ನ ಧಪನ ಭೂಮಿಯ ಎದುರುಗಡೆ ಸುನಿಲ್ ಕಾಬ್ರಾಲ್, ಜಾನ್ಸನ್ ಡಾಲ್ಪ್ರೆಡ್, ಕ್ಯಾಸ್ತಲಿನೋ ಡಾಲ್ಪೀ, ಕೋನಾರ್ಡ್ ಕ್ತಾಸ್ತಲಿನೋ, ಪೀಟರ್ ಕೋರ್ಡಾ, ರಾಯನ್ ಮೆನೆಜಸ್, ಮರಾಯನ್ ಮೆನೆಜಸ್ ಕುಡ್ತಮಜಲ್, ಅರ್ಥರ್ ಮೆನೇಜಸ್, ಅಂತೋನಿ ಮೆನೇಜಸ್ ಪಿಲಾರು, ವಿಲ್ಪ್ರೆಡ್ ಮಿನೇಜಸ್, ಕ್ಲಾರಾ ಕ್ವಾಡ್ರಸ್, ಸುನಿತಾ ಮೆನೇಜಸ್, ನಿಕಿಲ್ ಮಥಾಯಿಸ್, ಪ್ರತೀಕ್ಷಾ ಡಿಸೋಜ, ಲೀನಾ ಡಿಸೋಜ, ಡೆನೀಸಾ ಮಥಾಯಸ್ ಎಂಬವರು ಫಾ.ಡೆನ್ನೀಸ್ ಡೇಸಾ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಲು ಯತ್ನಿಸಿ ರುವುದಾಗಿ ದೂರಲಾಗಿದೆ.

ಅಲ್ಲದೆ ನ.3ರಂದು ಅವರು ಚರ್ಚ್‌ನ ಎದುರುಗಡೆ ಉಡುಪಿಯ ಬಿಷಪ್ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಫಾ.ಡೆನ್ನೀಸ್ ಡೇಸಾ ಅವರಿಗೆ ಬೆದರಿಕೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ ಮತ್ತು ಚರ್ಚ್‌ನ ಕಛೇರಿಯ ಸಿಬ್ಬಂದಿಯವರಲ್ಲಿ ಕೆಲಸ ಮಾಡದಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News