ಡಿ.5ರಿಂದ ‘ಸಾಗರ ರಕ್ಷಕ್-2019’ ಕಾರ್ಯಾಚರಣೆ

Update: 2019-12-04 16:08 GMT

ಉಡುಪಿ, ಡಿ.4: ಕರಾವಳಿ ಕಾವಲು ಪಡೆ, ಜಿಲ್ಲಾ ಪೊಲೀಸ್, ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳು ಜಂಟಿಯಾಗಿ ಡಿ.5ರ ಬೆಳಗ್ಗೆ 6ಗಂಟೆಯಿಂದ ಡಿ.6ರ ರಾತ್ರಿಯವರೆಗೆ ಉಡುಪಿ ಜಿಲ್ಲೆಯಲ್ಲಿ ‘ಸಾಗರ ರಕ್ಷಕ್-2019’ ಹೆಸರಿನಲ್ಲಿ ಕಾರ್ಯಾಚರಣೆಯನ್ನು ನಡೆಸಲಿವೆ.

ಈ ಅಣುಕು ಕಾರ್ಯಾಚರಣೆಯನ್ನು ನಗರ ಪ್ರದೇಶ, ಕರಾವಳಿ ತೀರ, ಮೀನುಗಾರಿಕಾ ಬಂದರು, ಹೆಚ್ಚು ಜನನಿಬಿಡ ಪ್ರದೇಶ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವ್ಯಾಪಾರ ಸಮುಚ್ಚಯ, ಪ್ರಮುಖ ದೇವಾಲಯಗಳು, ನಿರ್ಬಂದಿತ ಕೈಗಾರಿಕಾ ಪ್ರದೇಶಗಳಲ್ಲಿ ನಡೆಸಲಾಗುತ್ತದೆ.

ಈ ಸಮಯದಲ್ಲಿ ಭಯೋತ್ಪಾದಕರಂತೆ ನಟಿಸಿ, ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ನಕಲಿ ಸ್ಫೋಟಕಗಳನ್ನು ಇರಿಸುವುದು ಮತ್ತು ಅವುಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯಲಿದೆ. ಈ ಅಣುಕು ಕಾರ್ಯಾಚರಣೆಯ ಸಮಯದಲ್ಲಿ ಸಾರ್ವಜನಿಕರು ಗಾಬರಿಯಾಗದೆ, ಇಂತಹ ಗುಮಾನಿ ವ್ಯಕ್ತಿಗಳು ಅಥವಾ ನಕಲಿ ಸ್ಪೋಟಕಗಳು ಕಂಡು ಬಂದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ(0820- 2526444) ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News