ಡಿ.7, 8: ಕುದ್ರೋಳಿಯಲ್ಲಿ ಮುಹಬ್ಬತೇ ರಸೂಲ್ ಕಾರ್ಯಕ್ರಮ
ಮಂಗಳೂರು, ಡಿ.5: ವಾಯ್ಸ್ ಆಫ್ ಪೀಸ್ ಕುದ್ರೋಳಿ ವತಿಯಿಂದ ‘ಮುಹಬ್ಬತೇ ರಸೂಲ್ (ಸ) ಕಾರ್ಯಕ್ರಮ ಡಿ.7 ಮತ್ತು 8ರಂದು ಇಶಾ ನಮಾಝ್ ಬಳಿಕ ಎ-1 ಭಾಗ್ನಲ್ಲಿ ನಡೆಯಲಿದೆ.
7ರಂದು ಖಿಲಾರ್ ಫೈಝಲ್ ಅನ್ಸಾರಿ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್, ಮುಹಮ್ಮದ್ ರಾಷಿದ್ ಜೌಹರಿ ಕೊಲ್ಲಂ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ನಲ್ಲಿ ಮೌಲಾನಾ ಹನೀಫ್ ರಝಾ ಖಾನ್ ಬಿಜಾಪುರ ಹಾಗೂ ಮಾಸ್ಟರ್ ಮುಹಮ್ಮದ್ ಅಫ್ಳಲ್ ಕಿನಾರ ಅವರಿಂದ ನಅತ್ ಶರೀಫ್ ನಡೆಯಲಿದೆ.
8ರಂದು ಕಂಡತ್ಪಳ್ಳಿಯ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಅಧ್ಯಕ್ಷತೆಯಲ್ಲಿ ಮೊಹಿದಿನ್ ಪಳ್ಳಿ ಖತೀಬ್ ಮುಹಮ್ಮದ್ ಬಾಖವಿಯ ದುಆದೊಂದಿಗೆ ನಡುಪಳ್ಳಿ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ಅವರಿಂದ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಈ ಸಂದರ್ಭ ಕಾರ್ಪೊರೇಟರ್ಗಳಾದ ಶಂಸುದ್ದೀನ್ ಎಚ್ಬಿಟಿ, ಅಬ್ದುಲ್ಲತೀಫ್ ಕಂದಕ್, ಅಬ್ದುರ್ರವೂಫ್ ಹಾಗೂ ಝೀನತ್ ಪರವಾಗಿ ಅವರ ಪತಿ ಸಂಶುದ್ದೀನ್ಗೆ ಹಾಗೂ ಮಾಜಿ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಅವರಿಗೆ ಸನ್ಮಾನ ನಡೆಯಲಿದೆ ಎಂದು ಅಶ್ರಫ್ ಕಿನಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.