ಪುತ್ತೂರು : ನೂರಾನಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕುಟುಂಬ ಸಂಗಮ
Update: 2019-12-06 14:23 GMT
ಪುತ್ತೂರು : ನೂರಾನಿ ಫ್ಯಾಮಿಲಿ ಟ್ರಸ್ಟ್ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಮೀಲಾದ್ ಸಂಭ್ರಮ ಮತ್ತು ಕುಟುಂಬ ಸಂಗಮ ಕಾರ್ಯಕ್ರಮವು ತಲೆಪ್ಪಾಡಿ ಅರ ಹೌಸ್ ಸಭಾಂಗಣದಲ್ಲಿ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಮೂಸಲ್ ಮದನಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಅಬೂಬಕರ್ ಸಅದಿ ಸಭೆಯನ್ನು ಉದ್ಘಾಟಿಸಿದರು. ದಾವೂದ್ ಲತೀಫಿ ಕೊಕ್ಕಡ ಮುಖ್ಯ ಪ್ರಭಾಷಣ ನಡೆಸಿದರು. ಕುಟುಂಬದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಂಕತ್ತಳ ಅಬ್ದುಲ್ ಖಾದರ್ ಹಾಜಿ, ಇಸ್ಮಾಯಿಲ್ ಸಅದಿ, ಶಮೀರ್ ಸಖಾಫಿ,ಯೂಸುಫ್ ಕಾವು, ಅಬ್ದುಲ್ ಕರೀಂ ಇಂದಾದಿ ವೇದಿಕೆಯಲ್ಲಿ ಉಪಸ್ಥಿತರಾಗಿದ್ದು ಶುಭಾಶಂಸೆಗೈದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ, ಶರೀಫ್ ನಿಡ್ಪಳ್ಳಿ ವಂದಿಸಿದರು.