ಟೆಂಪೊ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2019-12-07 16:13 GMT

ಕೋಟ, ಡಿ.7: ಅಂಡಾರುಕಟ್ಟೆ ಜಂಕ್ಷನ್ ಬಳಿ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಗೂಡ್ಸ್ ಟೆಂಪೊವೊಂದು ಎದುರಿನಲ್ಲಿ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿ ಯಾಗಿದೆ.

ಕೊಕ್ಕರ್ಣೆ ಬೈದಬೆಟ್ಟು ನಿವಾಸಿ ಸುಕುಮಾರ ಎಂಬವರ ಮಗ ಸಂದೇಶ ನಾಯ್ಕ (21) ಎಂದು ಗುರುತಿಸಲಾಗಿದೆ. ಡಿ.6ರಂದು ಸಂಜೆ ಶಿರೂರು ಮೂರಕೈ ಕಡೆಯಿಂದ ಗೋಳಿಯಂಗಡಿ ಹೋಗುತ್ತಿದ್ದ ಇವರ ಬೈಕಿಗೆ ಎದುರಿನಲ್ಲಿ ಬರುತ್ತಿದ್ದ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯ ಗೊಂಡ ಸಂದೇಶ್ ನಾಯ್ಕ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.7ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News