ಉಡುಪಿ ಜಾಮೀಯ ಮಸೀದಿ ಅಧ್ಯಕ್ಷರಾಗಿ ಮುಹಮ್ಮದ್ ಅರ್ಷದ್

Update: 2019-12-07 16:16 GMT

ಉಡುಪಿ, ಡಿ.7: ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ನಿರ್ದೇಶನ ದಂತೆ ಉಡುಪಿ ಜಾಮೀಯ ಮಸೀದಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಶುಕ್ರವಾರ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಅರ್ಷದ್, ಉಪಾಧ್ಯಕ್ಷರಾಗಿ ಕರಾಮತ್ ಅಲಿ, ಕಾರ್ಯದರ್ಶಿಯಾಗಿ ವಿ.ಎಸ್.ಉಮ್ಮರ್, ಖಜಾಂಚಿಯಾಗಿ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ, ಸದಸ್ಯರುಗಳಾಗಿ ಪಿ.ಖಲೀಲ್ ಅಹ್ಮದ್, ಖಾಲಿದ್ ಅಬ್ದುಲ್ ಅಝೀಝ್, ಮುಹಮ್ಮದ್ ಫಯಾಝ್, ಮುಹಮ್ಮದ್ ಇಫ್ತಿಕಾರ್, ಮುನೀರ್ ಮುಹಮ್ಮದ್, ಸಲಾಹುದ್ದೀನ್ ಅಬ್ದುಲ್ಲಾ, ಶಮ್ಸ್ ತಬ್ರೇಝ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಚುನಾವಣಾ ವೀಕ್ಷಕ ಎಂ.ಪಿ.ಮೊದಿನಬ್ಬ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ, ಸದಸ್ಯರಾದ ಹಬೀಬ್ ಅಲಿ, ಅಧಿಕಾರಿ ಗಳಾದ ಮುಜಾಹಿದ್ ಪಾಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News