ಡಿ. 26: ಮಂಜನಾಡಿ ಉಸ್ತಾದ್ ಆಂಡ್ ನೇರ್ಚೆ, ರಾತೀಬ್ ವಾರ್ಷಿಕೋತ್ಸವ

Update: 2019-12-07 17:27 GMT

ಮಂಜನಾಡಿ: ಮಂಜನಾಡಿ ಸಿ.ಪಿ. ಉಸ್ತಾದರ 8ನೇ ಉರೂಸ್ ಆಂಡ್ ನೇರ್ಚೆ ಹಾಗೂ 53 ನೇ ವರ್ಷದ ಜಲಾಲಿಯಾ ರಾತೀಬ್, ಗೌಸಿಯತುಲ್ ಖಾದಿರಿಯ್ಯ  ಡಿ. 26 ರಂದು ರಾತ್ರಿ ಕಾಞಂಗಾಡ್ ಪಝಕಡಪುರಮ್ ನಲ್ಲಿ ನಡೆಯಲಿದೆಂದು ಕಾಡಾಚಿರ ಅಬ್ದುರ್ರಹ್ಮಾನ್ ಮುಸ್ಲಿಯಾರ್ ತಿಳಿಸಿದರು.

ಮಂಜನಾಡಿ ಅಲ್ ಮದೀನದಲ್ಲಿ ಇಂದು ಈ ಬಗ್ಗೆ ಕರೆಯಲಾದ ಉಸ್ತಾದರ ಅಭಿಮಾನಿಗಳ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಕೆ.ಪಿ. ಅಹ್ಮದ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಇದರ ಅಧ್ಯಕ್ಷರಾಗಿ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ ಇವರನ್ನು ಆರಿಸಲಾಯಿತು. ಸಲಹಾ ಮಂಡಳಿ ಸದಸ್ಯರಾಗಿ ಕಾಡಾಚಿರ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಕೆ.ಪಿ. ಅಹ್ಮದ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಇವರನ್ನೂ, ಕನ್ವೀನರ್ ಆಗಿ ಮುಹಮ್ಮದ್ ಮದನಿ ಸಾಮಣಿಗೆ, ಕೋಶಾಧಿಕಾರಿಯಾಗಿ ಹಾಜಿ ಮೊಯ್ದಿನ್ ಮೊಂಟೆಪದವು, ವೈಸ್ ಚಯರ್ಮಾನ್ ಗಳಾಗಿ ಪುತ್ತು ಮೋರ್ಲ, ಅಬ್ದುಲ್ಲ ಹಾಜಿ ಮೋರ್ಲ, ಬಾವ ಹಾಜಿ ಪಂಜಲ, ಏಶಿಯನ್ ಬಾವ ಹಾಜಿ, ಶೌಕತ್ ಹಾಜಿ ದೇರಳಕಟ್ಟೆ ಸಹ ಕನ್ವೀನರ್ ಆಗಿ ಖಾಲಿದ್ ಹಾಜಿ ಭಟ್ಕಳ, ಹುಸೈನ್ ಹಾಜಿ ಪಣಿಯೂರು, ಕುಂಞಿ ಬಾವ ಮಂಜನಾಡಿ, ಅಬ್ಬು ಮಂಜನಾಡಿ ಹಾಗೂ ಸದಸ್ಯರುಗಳಾಗಿ ಮುನೀರ್ ಸಖಾಫಿ, ಪಡಿಕ್ಕಲ್ ಮದನಿ, ಅಬೂಬಕರ್ ಮುಸ್ಲಿಯಾರ್ ಮೊಂಟೆಪದವು, ಹಸನ್ ಕುಂಞಿ ಹಾಜಿ ಸಾಂಬಾರ್ ತೋಟ,  ಮೊಯ್ದಿನ್ ಹಾಜಿ ತೋಟಾಲ್, ಜಮಾಲುದ್ದೀನ್ ಮುಸ್ಲಿಯಾರ್, ಶೇಖುಂಞಿಚ್ಚ ಮಂಜನಾಡಿ, ಕಂಡಿಕ ಮುಹಮ್ಮದ್ ಹಾಜಿ, ಜೀಲಾನಿ ಮುಹಮ್ಮದ್ ಹಾಜಿ, ಸುಲೈಮಾನ್ ಹಾಜಿ ಸಾಮಣಿಗೆ, ಸಿದ್ದೀಕ್ ಅಹ್ಸನಿ, ಇಕ್ಬಾಲ್ ಮರ್ಝೂಖಿ,  ಹಾಜಿ ಫಾರೂಖ್ ಪ್ರಿಂಟೆಕ್, ಖಾದರ್ ಪಾವೂರ್, ಜುನೈದ್ ಮರ್ಜೂಖಿ, ಇರ್ಶಾದ್ ಮದನಿ, ಹಾಫಿಲ್ ಮರ್ಸದ್, ಇಬ್ರಾಹೀಂ ಮುಸ್ಲಿಯಾರ್ ಪೊಟ್ಟೊಳಿಕೆ, ಹುಸೈನ್ ಹಾಜಿ ಪನೀರ್, ಇಬ್ರಾಹೀಂ ಮದನಿ, ಅಬ್ದುರ್ರಝಾಕ್ ಮುಸ್ಲಿಯಾರ್ ನಾಟೆಕಲ್, ಮುಹಮ್ಮದ್ ಮುಸ್ಲಿಯಾರ್ ಮಂಜೇರಿ, ಪುತ್ತಿಚ್ಚ ಕೊರಕಟ್ಟ, ಸನಾವುಲ್ಲ ಮಂಜನಾಡಿ, ಅಬ್ಬಾಸ್ ಮೋರ್ಲ, ಕೆ.ಪಿ.ಇಬ್ರಾಹೀಂ ಮುಂತಾದವರನ್ನು ಆರಿಸಲಾಯಿತು. ಮುಹಮ್ಮದ್ ಕುಂಞಿ ಅಮ್ಜದಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News