ಬಂಟರಯಾನೆ ನಾಡವರ ಸಂಘ: ಅಧ್ಯಕ್ಷರಾಗಿ ಅಜಿತ್ ಕುಮಾರ್ ಪುನರಾಯ್ಕೆ

Update: 2019-12-08 16:45 GMT

ಮಂಗಳೂರು, ಡಿ. 8: ಬಂಟರಯಾನೆ ನಾಡವರ  ಸಂಘದ ಅಧ್ಯಕ್ಷರಾಗಿ ಮಾಲಾಡಿ ಅಜಿತ್  ಕುಮಾರ್  ರೈ ಪುನರಾಯ್ಕೆ ಆಗಿದ್ದಾರೆ.

ಇಂದು ನಡೆದ ಮತದಾನದ ಮತ ಎಣಿಕೆ ಕಾರ್ಯ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ರಾತ್ರಿ ಮುಕ್ತಾಯಗೊಂಡಿದೆ.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಪಡೆದ ಮತಗಳು 4,791 ಪ್ರತಿಸ್ಪರ್ಧಿ ಸುರೇಶ್ಚಂದ್ರ ಶೆಟ್ಟಿ 2193 ಮತಗಳನ್ನು ಪಡೆದಿದ್ದಾರೆ. ಅಂತಿಮವಾಗಿ ಮಾಲಾಡಿ ಅಜಿತ್ ಕುಮಾರ್ ರೈ 2,598 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಒಟ್ಟು 22,800 ಮತದಾರರಲ್ಲಿ 7337ಮಂದಿ ಮತ ಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News