ವೃದ್ಧಾಶ್ರಮದ ನಿವಾಸಿಗಳಿಗೆ ಊಟ ವಿತರಣೆ

Update: 2019-12-10 15:19 GMT

ಉಡುಪಿ ಡಿ.10: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಮಾರ್ಗ ದರ್ಶನದಲ್ಲಿ ಉಡುಪಿ ಅಲ್-ಹಿಕ್ಮಾ ಗೈಡೆನ್ಸ್ ಸೆಂಟರ್ ಹಾಗೂ ಮಲ್ಪೆ ಕಲೇಮಾ ಸೆಂಟರ್‌ಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕಲ್ಯಾಣಪುರದ ಒಝೋನಮ್ ಹಾಗೂ ಗೊರಟ್ಟೆ ಆಸ್ಪತ್ರೆಯಲ್ಲಿರುವ ವೃದ್ಧಾಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಊಟವನ್ನು ವಿತರಿಸಲಾಯಿತು.

ಅಲ್- ಹಿಕ್ಮಾ ಗೈಡೆನ್ಸ್ ಸೆಂಟರ್ ಇದರ ಸಮಾಜ ಸೇವಾ ವಿಭಾಗದ ಸಂಚಾಲಕ ಮುಹಮ್ಮದ್ ಇಮ್ತಿಯಾಝ್, ಕಲೇಮಾ ಸೆಂಟರ್‌ನ ಅಧ್ಯಕ್ಷ ಟಿ.ಎಂ.ಇಜಾಝ್, ಮುಝಮ್ಮಿಲ್ ಕೊಚ್ಚಿ, ಸಾಧಿಕ್ ಕೊಚ್ಚಿ, ಸೈಯದ್ ಯಾಸೀನ್, ನಯಾಝ್, ಪರ್ವೆಝ್ ಮಲ್ಪೆ, ಮುಹಮ್ಮದ್ ಅರ್ಫಾಝ್, ಝಾಕೀರ್, ಸವೂದ್, ನಾಕ್ವಾ ರಾಝೀಕ್, ಫೈಸಲ್ ಸುಲೈಮಾನ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News