ಅಪಘಾತ: ಗಾಯಾಳು ಸವಾರ ಮೃತ್ಯು
Update: 2019-12-10 15:21 GMT
ಕಾಪು, ಡಿ.10: ವಾರದ ಹಿಂದೆ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಅಫಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪಾಂಗಾಳ ಗುಡ್ಡೆ ನಿವಾಸಿ ಶೈಲೇಶ್ ಜೈನ್(68) ಎಂದು ಗುರು ತಿಸಲಾಗಿದೆ. ಇವರು ಡಿ.3ರಂದು ಸಂಜೆ ಕಾಪುವಿನಿಂದ ತನ್ನ ಮನೆಗೆ ಹೋಗು ತ್ತಿದ್ದ ವೇಳೆ ಹಿಂದಿನಿಂದ ಬಂದ ಟಾಟಾ ಏಸ್ ಗೂಡ್ಸ್ ವಾಹನ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ತೀವ್ರವಾಗಿ ಗಾಯಗೊಂಡ ಇವರು ಚಿಕಿತ್ಸೆ ಫಲಕಾರಿಯಾಗದೆ ಡಿ.10ರಂದು ಬೆಳಗಿನ ಜಾವ 4:40ರ ಸುಮಾರಿಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.