ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ.ಮೋಹನದಾಸ್‌ಗೆ ಸನ್ಮಾನ

Update: 2019-12-10 15:53 GMT

ಉಡುಪಿ, ಡಿ.10: ಜಯಂಟ್ಸ್ ಗ್ರೂಪ್ ಉಡುಪಿ ಇದರ ವತಿಯಿಂದ ಕಿದಿಯೂರು ಹೋಟೆಲ್ ಹಾಲ್ ಇತ್ತೀಚೆಗೆ ಜರಗಿದ ಸಮಾರಂಭದಲ್ಲಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ.ಮೋಹನದಾಸ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯ ಕೃಷ್ಣರಾಜ್ ಕೊಂಡಂಚ, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್, ಜಯಂಟ್ಸ್ ಗ್ರೂಪ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮಿನ್, ಕಾರ್ಯದರ್ಶಿ ಯಶವಂತ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News