​ಅಪಘಾತ: ಚಿಕಿತ್ಸೆ ಫಲಕಾರಿಯಾಗದೇ ಪಾದಚಾರಿ ಸಾವು

Update: 2019-12-10 16:24 GMT

ಮಂಗಳೂರು, ಡಿ.10: ನಗರದ ಬೋಂದೆಲ್ ಸಮೀಪದ ಪದವಿನಂಗಡಿಯ ಪೆರ್ಲಗುರಿ ಕ್ರಾಸ್ ಬಳಿ ಮೋಟಾರ್ ಸೈಕಲ್ ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದಾರೆ.

ಮೂಡುಬಿದಿರೆ ಮೂಲದ ಪ್ರಸ್ತುತ ಪಚ್ಚನಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸದಾನಂದ (40) ಮೃತರು.
ಸೋಮವಾರ ಸಂಜೆ 5:30ಕ್ಕೆ ಪದವಿನಂಗಡಿ ಪೇಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಾ ಪೆರ್ಲಗುರಿ ಕ್ರಾಸ್ ಬಳಿ ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದರು. ಕೆಪಿಟಿ ಕಡೆಯಿಂದ ಬೋಂದೆಲ್‌ನತ್ತ ಸಾಗುತ್ತಿದ್ದ ಮೋಟಾರ್ ಸೈಕಲ್ ಸದಾನಂದ ಅವರಿಗೆ ಢಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದು ಗಾಯಗೊಂಡಿದ್ದ ಸದಾನಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಆದರೆ ಮಂಗಳವಾರ ಬೆಳಗ್ಗೆ ಮನೆಯಲ್ಲಿದ್ದ ವೇಳೆ ಅವರಿಗೆ ಎದೆನೋವು ಉಲ್ಬಣಗೊಂಡ ಕಾರಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಸಾವನ್ನಪ್ಪಿದರು.

ಈ ಕುರಿತು ಮಂಗಳೂರು ನಗರ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾನಂದ ಅವರು ಹೊಟೇಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News