ಕಾರ್ಕಳ : ತಂದೆಯಿಂದ ಮಗನ ಕೊಲೆ

Update: 2019-12-10 17:40 GMT

ಕಾರ್ಕಳ : ಕುಡಿದ ಮತ್ತಿನಲ್ಲಿ ತಂದೆ ಹಾಗೂ‌ ಮಗನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದೆ ಎನ್ನಲಾದ ಜಗಳ ಕೊಲೆ ಹಂತಕ್ಕೆ ತಲುಪಿದ ಘಟನೆ ಮಂಗಳವಾರ ನಡೆದಿದೆ.

ಕಸಬಾ ವ್ಯಾಪ್ತಿಯ ಮಂಗಳಪಾದೆ ನಿವಾಸಿ ವಿವಿಯನ್ ಡಿಸೋಜಾ (24) ಮೃತರು ಎಂದು ಗುರುತಿಸಲಾಗಿದೆ. ವಿಕ್ಟೋರ್ ಡಿಸೋಜಾ ತನ್ನ ಮಗನಿಗೆ ಕುಡಿದ ಮತ್ತಿನಲ್ಲಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದರು ಎನ್ನಲಾಗಿದ್ದು, ರಕ್ತದ ಮುಡುವಿನಲ್ಲಿ ಬಿದ್ದದ್ದ ವಿವಿಯನ್ ಮೃತಪಟ್ಟಿದ್ದಾರೆ. ವಿವಿಯನ್ ಸಹೋದರ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News