ಕೃಷ್ಣಾಪುರ: ಯುನಿವೆಫ್‌ನಿಂದ ಮೊಹಲ್ಲಾ ಸಭೆ

Update: 2019-12-10 18:07 GMT

ಸುರತ್ಕಲ್, ಡಿ.10: ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಅಂಗವಾಗಿ ಕೃಷ್ಣಾಪುರ ಶಾಖೆಯ ವತಿಯಿಂದ ಮೊಹಲ್ಲಾ ಸಭೆಯು ಕೃಷ್ಣಾಪುರದ ಪ್ಯಾರಡೈಸ್ ಕ್ಲಬ್‌ನಲ್ಲಿ ಜರಗಿತು.

'ಪ್ರಚಲಿತ ವಿದ್ಯಮಾನ ಮತ್ತು ಪ್ರವಾದಿಯವರ ಬೋಧನೆ' ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತಾಡಿ ರಾಜಕೀಯ ಸಿದ್ಧಾಂತದಿಂದ ಸಬಲೀಕರಣ ಮಾಡುವುದಕ್ಕಿಂತ ಮೊದಲು ಜನರಲ್ಲಿ ನಮ್ಮ ಬಗ್ಗೆ ಮೂಡಿರುವ ತಪ್ಪುಕಲ್ಪನೆಗಳನ್ನು ನೀಗಿಸಿದರೆ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂದು ಅಭಿಪ್ರಾಯಿಸಿದರು.

ಯುನಿವೆಫ್ ಜಿಲ್ಲಾ ಕಾರ್ಯದರ್ಶಿ ಸಿರಾಜುದ್ದೀನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುದ್ರೋಳಿ ಶಾಖಾ ಕಾರ್ಯದರ್ಶಿ ಅರ್ಶಲನ್ ಕಿರಾಅತ್ ಪಠಿಸಿದರು. ಕುದ್ರೋಳಿ ಶಾಖಾಧ್ಯಕ್ಷ ಸೈುದ್ದೀನ್ ಕುದ್ರೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕುದ್ರೋಳಿ ಶಾಖಾ ಸದಸ್ಯ ಅಬೂಬಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News