ಆ್ಯಗ್ನೆಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡೋತ್ಸವ
ಮಂಗಳೂರು, ಡಿ.11: ನಗರದ ಸಂತ ಆಗ್ನೆಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡೋತ್ಸವವು ಮಂಗಳವಾರ ಜರಗಿತು. ಸಿಸ್ಟರ್ ಡಾ.ಜೆಸ್ವೀನಾ ಎ.ಸಿ. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಜ್ಯೋತಿ ಬೆಳಕಿಗಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕ್ರೀಡಾಂಗಣ ದಲ್ಲಿ ವಿಜೇತರಾದವರು, ಜೀವನದಲ್ಲೂ ವಿಜೇತರಾಗುವರು ಎಂದರು.
ಕ್ರೀಡಾ ಕಾರ್ಯದರ್ಶಿ ನಿಶಾ ರೋಶ್ನಿ ಡಿಸೋಜ, ದೈಹಿಕ ಸಂಸ್ಕೃತಿ ಬೋಧಕಿ ವಸುಧಾ ಎಸ್., ಸಂತ ಆಗ್ನೆಸ್ ಕಾಲೇಜಿನ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಾ.ಮರಿಯಾ ರೂಪಾ ಎ.ಸಿ. ಉಪಸ್ಥಿತರಿದ್ದರು. 100, 200, 400 ಮೀ., ರಿಲೇ ಮತ್ತಿತರ ಅಥ್ಲೆಟಿಕ್ಸ್ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅತ್ಯುತ್ತಮ ಪಥ ಸಂಚಲನ ಪ್ರದರ್ಶಿಸಿದ ಪ್ರಥಮ ಬಿಬಿಎ, ದ್ವಿತೀಯ ಬಿಕಾಂ ‘ಎ’ ವಿಭಾಗ, ತೃತೀಯ ಬಿಕಾಂ ‘ಎ’ ವಿಭಾಗದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಸಮಗ್ರ ನಾಯಕತ್ವ ಬಹುಮಾನವನ್ನು ದ್ವಿತೀಯ ಬಿಎಸ್ಸಿ ‘’ಬಿ’ ವಿಭಾಗದ ವಿದ್ಯಾರ್ಥಿನಿಯರಿಗೆ ನೀಡಲಾಯಿತು.